ಬಿಬಿಎಂಪಿ ಕಂದಾಯ ವಿಭಾಗದ ಜಂಟಿ ಕಮಿಷನರ್ ಎಂ. ವೆಂಕಟಾಚಲಪತಿ ಅವರು ಬಿ ಖಾತಾನಿವೇಶನಗಳಲ್ಲಿ ಆಸ್ತಿ ಹೊಂದಿರುವ ಮಾಲೀಕರ ಸಮಸ್ಯೆಗಳ ಪರಿಹಾರಕ್ಕೆ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಲಾಗಿದೆ. ಬಿ ಖಾತಾಗಳಲ್ಲಿ ಕಟ್ಟಡ ಹೊಂದಿರುವವರು ಮಾಲೀಕತ್ವ ಸಾಬೀತುಪಡಿಸಲು ಪರದಾಡುತ್ತಿದ್ದಾರೆ. ಅವರಿಗೆ ಬ್ಯಾಂಕ್ ಸಾಲ ದೊರೆಯುವುದಿಲ್ಲ. ಅಲ್ಲದೆ, ನಾಗರಿಕ ಸೌಲಭ್ಯಗಳೂ ಸಿಗುತ್ತಿಲ್ಲ. ಇಂಥ 4.10 ಲಕ್ಷ ಮಾಲೀಕರಿದ್ದಾರೆ ಎಂದರು.