ಬೆಂಗಳೂರು: ರಾಜ್ಯ ರಸ್ತೆ ಸಾರಿಗೆಯ ಎಲ್ಲ ನಿಗಮಗಳು ನಷ್ಟದಲ್ಲಿ ಇರುವುದರಿಂದ ಲಾಭಕ್ಕೆ ತರಲು ತಜ್ಞರನ್ನು ಒಳಗೊಂಡ ಕಾರ್ಯಪಡೆ ರಚಿಸಲಾಗುವುದು ಎಂದು ಸಾರಿಗೆ ಸಚಿವ ಬಿ.ಶ್ರೀ ರಾಮುಲು ತಿಳಿಸಿದರು.
ಇಲಾಖೆಯ ಪ್ರಗತಿ ಪರಿಶೀಲನೆ ಸಭೆಯ ಬಳಿಕ ಮಾತನಾಡಿದ ಅವರು, ಆರು ತಿಂಗಳಲ್ಲಿ ನಷ್ಟವು ಇಲ್ಲದ - ಲಾಭವೂ ಇಲ್ಲದ ಹಂತಕ್ಕೆ ತರಲಾಗುವುದು ಎಂದರು.
ಕೆಎಸ್ಆರ್ಟಿಸಿ ₹427 ಕೋಟಿ, ಬಿಎಂಟಿಸಿ ₹548, ಎನ್ಡಬ್ಲ್ಯುಕೆಆರ್ಟಿಸಿ ₹389 ಕೋಟಿ, ಕಲ್ಯಾಣ ಕರ್ನಾಟಕ ಸಾರಿಗೆ ನಿಗಮ ₹191 ಕೋಟಿ, ಒಟ್ಟು ₹1171 ಕೋಟಿ ನಷ್ಟ ಆಗಿದೆ ಎಂದು ವಿವರ ನೀಡಿದರು.
ಸಾರಿಗೆ ನಿಗಮಗಳ ನೌಕರರಿಗೆ ಸರ್ಕಾರದ ಬೊಕ್ಕಸದಿಂದ ಸಂಬಳ ನೀಡಲಾಗಿದೆ. ಒಟ್ಟು ₹1953 ಕೋಟಿ ಸಂಬಳಕ್ಕಾಗಿ ಸರ್ಕಾರ ನೀಡಿದೆ ಎಂದು ರಾಮುಲು ಹೇಳಿದರು.