<p><strong>ಬೆಂಗಳೂರು:</strong> ವಾಣಿಜ್ಯ ಬಳಕೆಯ ಸಿಲಿಂಡರ್ಗಳ ಅಭಾವ ತೀವ್ರವಾಗಿದ್ದು, ಹೋಟೆಲ್ ಉದ್ಯಮಕ್ಕೆ ದೊಡ್ಡ ಹೊಡೆತ ಬಿದ್ದಿದೆ. ದಿನೇ ದಿನೇ ಸಿಲಿಂಡರ್ ಸಮಸ್ಯೆ ಉಲ್ಬಣಿಸುತ್ತಿದ್ದು, ಹೋಟೆಲ್ ವ್ಯವಹಾರ ಶೇಕಡ 40ರಷ್ಟು ಕುಸಿದಿದೆ.</p>.<p>ದುಪ್ಪಟ್ಟು ಹಣ ನೀಡಿದರೂ ಸಿಲಿಂಡರ್ ಸಿಗದ ಕಾರಣ ಹಲವು ಹೋಟೆಲ್, ದರ್ಶನಿ, ರೆಸ್ಟೋರೆಂಟ್, ಢಾಬಾಗಳು ಬಂದ್ ಆಗಿವೆ. ಇದರ ಹೊರತಾಗಿಯೂ ಕೆಲವು ಹೋಟೆಲ್ನವರು ಇಂಡಕ್ಷನ್ ಸ್ಟೌ, ಸೌದೆ ಒಲೆ, ಎಲೆಕ್ಟ್ರಿಕ್ ಸ್ಟೌ ಸಹಿತ ಪರ್ಯಾಯ ವ್ಯವಸ್ಥೆ ಮಾಡಿಕೊಂಡು ದಿನದೂಡುತ್ತಿದ್ದಾರೆ.</p>.<p>ಮೆನುವಿನಲ್ಲಿ ಕೆಲವೊಂದು ಖಾದ್ಯಗಳನ್ನು ಕಡಿತಗೊಳಿಸಿ, ಸೀಮಿತ ಪ್ರಮಾಣದಲ್ಲಿ ಆಹಾರ ವಿತರಿಸಲಾಗುತ್ತಿದೆ. ಮೂರು ವಾರಗಳಿಂದ ಹಲವು ಹೋಟೆಲ್ಗಳು ನಷ್ಟದಲ್ಲೇ ನಡೆಯುತ್ತಿವೆ. ಬೆಂಗಳೂರು ಹೋಟೆಲ್ಗಳ ಸಂಘದ ಪ್ರಕಾರ ಎರಡು ವಾರದಲ್ಲಿ ₹150 ಕೋಟಿಗೂ ಅಧಿಕ ನಷ್ಟ ಉಂಟಾಗಿದೆ.</p>.<p>ಸಿಲಿಂಡರ್ ಸಮಸ್ಯೆಯಿಂದಾಗಿ ಹೋಟೆಲ್ಗಳ ಅಗ್ನಿ ಆರಿದೆ. ಬಾಣಲೆಗಳು ತಣ್ಣಗಾಗಿವೆ. ಸಿಲಿಂಡರ್ ಸಿಕ್ಕರೆ ಸಾಕು ಎಂಬ ನಿರೀಕ್ಷೆಯಲ್ಲೇ ದಿನ ಕಳೆಯುತ್ತಿರುವ ಹೋಟೆಲ್ ಮಾಲೀಕರು ಒಂದು ಕಡೆ, ಗ್ರಾಹರಿಗೆ ಊಟ–ತಿಂಡಿ ಸಿಗದ ನಿರಾಸೆ ಇನ್ನೊಂದು ಕಡೆ. ಈ ಮಧ್ಯೆ ಹೋಟೆಲ್ ಕಾರ್ಮಿಕರಿಗೆ ಭವಿಷ್ಯದ ಚಿಂತೆ ಕಾಡುತ್ತಿದೆ.</p>.<p>ಬೆಂಗಳೂರು ನಗರದಲ್ಲಿ 40 ಸಾವಿರಕ್ಕೂ ಅಧಿಕ ಹೋಟೆಲ್ಗಳಿವೆ. ಸಾರ್ವಜನಿಕರು, ಆಟೊ–ಟ್ಯಾಕ್ಸಿ ಚಾಲಕರು, ಆನ್ಲೈನ್ ಡೆಲಿವರಿ ನೌಕರರು, ಕಟ್ಟಡ ನಿರ್ಮಾಣ ಕಾರ್ಮಿಕರು, ಆಸ್ಪತ್ರೆಗಳ ರೋಗಿಗಳು, ಅವಿವಾಹಿತರು, ಹಿರಿಯ ನಾಗರಿಕರು , ಪೇಯಿಂಗ್ ಗೆಸ್ಟ್ಗಳಲ್ಲಿ ವಾಸವಾಗಿರುವವರು ನಿತ್ಯ ಹೋಟೆಲ್ಗಳನ್ನು ಅವಲಂಬಿಸಿದ್ದಾರೆ. ಗ್ಯಾಸ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿರುವ ಕಾರಣ 40 ಸಾವಿರ ಹೋಟೆಲ್ ಉದ್ಯಮಿಗಳು, ಆರು ಲಕ್ಷಕ್ಕೂ ಹೆಚ್ಚು ನೌಕರರಿಗೆ ಸಮಸ್ಯೆ ಉಂಟಾಗಿದೆ.</p>.<p>ಹೋಟೆಲ್ ಎದುರು ‘ಸಿಲಿಂಡರ್ ಕೊರತೆ, ಗ್ರಾಹಕರು ಸಹಕರಿಸಿ’ ಎಂಬ ಫಲಕಗಳು ಕಂಡುಬರುತ್ತಿವೆ. ಹತ್ತಾರು ಖಾದ್ಯಗಳನ್ನು ಮಾಡುತ್ತಿದ್ದ ಹೋಟೆಲ್ಗಳಲ್ಲಿ ಈಗ ಉಪ್ಪಿಟ್ಟು, ರೈಸ್ ಬಾತ್, ಕೇಸರಿಭಾತ್ ಮಾತ್ರ ತಯಾರಿಸಲಾಗುತ್ತಿದೆ. ನಗರದಲ್ಲಿ ವಾರಾಂತ್ಯದಲ್ಲಿ ಗ್ರಾಹಕರಿಂದ ತುಂಬಿರುತ್ತಿದ್ದ ರಾಜಾಜಿನಗರ, ಮಲ್ಲೇಶ್ವರ, ವಿಜಯನಗರ, ಬಸವೇಶ್ವರ ನಗರ, ಜಯನಗರದ ಹಲವು ಹೋಟೆಲ್ಗಳು ಮುಚ್ಚಿವೆ. ವಿಶೇಷವಾಗಿ ಮಾಂಸಾಹಾರಿ ಹೋಟೆಲ್ಗಳಲ್ಲಿ ಎಂದಿನ ಜನಜಂಗುಳಿ ಇರಲಿಲ್ಲ. ಅಡುಗೆ ಅನಿಲ ಹೆಚ್ಚು ಬಳಕೆಯಾಗುವ ಪದಾರ್ಥಗಳ ತಯಾರಿಕೆಯನ್ನೇ ಕೈ ಬಿಟ್ಟಿದ್ದಾರೆ.</p>.<p>‘ಸಣ್ಣ, ಮಧ್ಯಮ, ದೊಡ್ಡ ಹೋಟೆಲ್ಗಳಲ್ಲಿ ಸೌದೆ ಬಳಸಲಾಗುತ್ತಿದೆ. ಹಾಗಾಗಿ ಸೌದೆಗೆ ಬೇಡಿಕೆ ಹೆಚ್ಚಾಗಿ, ಅವುಗಳ ಬೆಲೆಯಲ್ಲೂ ಏರಿಕೆಯಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ನಗರಕ್ಕೆ ಸೌದೆ ತರಿಸಲಾಗುತ್ತಿದೆ. ಕ್ವಿಂಟಲ್ಗೆ ₹3,500ಕ್ಕೆ ಸಿಗುತ್ತಿದ್ದ ಸೌದೆ, ಈಗ ₹5 ಸಾವಿದರಿಂದ ₹8 ಸಾವಿರಕ್ಕೆ ಏರಿಕೆಯಾಗಿದೆ. ಎಲ್ಪಿಜಿ ಸಿಲಿಂಡರ್ಗಳಲ್ಲಿ ಅಡುಗೆ ಮಾಡಿ ರೂಢಿಯಾಗಿದ್ದ ಸಿಬ್ಬಂದಿಯು, ಈಗ ಸೌದೆ ಒಲೆಯಲ್ಲಿ ಅಡುಗೆ ತಯಾರಿಸಲು ಕಷ್ಟಪಡುತ್ತಿದ್ದಾರೆ. ಸಿಲಿಂಡರ್ ಕೊರತೆ ಯಾವತ್ತೂ ಆಗಿರಲಿಲ್ಲ’ ಎಂದು ಹೋಟೆಲ್ ಮಾಲೀಕರು ಹೇಳಿದರು.</p>.<p>‘ಗ್ಯಾಸ್ ಸ್ಟೌಗಳಲ್ಲಿ ಒಂದೆರೆಡು ತಾಸುಗಳಲ್ಲಿ ಅಡುಗೆಗಳು ತಯಾರಾಗುತ್ತಿದ್ದವು. ಆದರೆ, ಈಗ ಹೆಚ್ಚು ಸಮಯ ತೆಗೆದುಕೊಳ್ಳುತ್ತಿದೆ. ₹2 ಸಾವಿರಕ್ಕೆ ಸಿಗುತ್ತಿದ್ದ ಸೌದೆ ಒಲೆಗಳು, ಈಗ ₹4 ಸಾವಿರದಿಂದ ₹5 ಸಾವಿರಕ್ಕೆ ಹೆಚ್ಚಳವಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು. </p>.<p>‘ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆ ₹1,800. ಆದರೆ, ಕಾಳಸಂತೆಯಲ್ಲಿ ₹7 ಸಾವಿರದಿಂದ ₹8 ಸಾವಿರಕ್ಕೆ ಮಾರಾಟ ಮಾಡಲಾಗುತ್ತಿದೆ. ಯುದ್ಧ ಆರಂಭವಾದ ಬಳಿಕ ಏಜೆನ್ಸಿಯವರು ಮೊಬೈಲ್ ಕರೆ ಸ್ವೀಕರಿಸುತ್ತಿಲ್ಲ. ಕಾಫಿ–ಟೀ ಅಂಗಡಿ, ಪಾನಿಪುರಿ, ಗೋಬಿ ಮಂಚೂರಿ ಅಂಗಡಿಗಳು ಬಂದ್ ಆಗಿವೆ. ಸಣ್ಣ ಮತ್ತು ಮಧ್ಯಮ ಹೋಟಲ್ಗಳ ಮಾಲೀಕರು ದುಬಾರಿ ಹಣ ಕೊಟ್ಟು ಸಿಲಿಂಡರ್ ಖರೀದಿಸಲು ಸಾಧ್ಯವೇ ’ ಎಂದು ಜಾಲಹಳ್ಳಿ ಕ್ರಾಸ್ ಬಳಿಯ ಹೋಟೆಲ್ ಮಾಲೀಕ ರವಿ ಪ್ರಶ್ನಿಸಿದರು.</p>.<p>ಪೇಯಿಂಗ್ ಗೆಸ್ಟ್ಗಳಲ್ಲಿ (ಪಿ.ಜಿ) ಸ್ವಲ್ಪ ಮಟ್ಟಿಗೆ ಚೇತರಿಕೆ ಕಾಣುತ್ತಿದೆ. ಮೂರು ಹೊತ್ತಿನ ಬದಲು ಎರಡು ಹೊತ್ತಿನ ಊಟ ನೀಡಲಾಗುತ್ತಿದೆ. ಕೆಲ ಮಂದಿ ಮನೆಯಿಂದಲೇ ಕೆಲಸ ಮಾಡುತ್ತಿದ್ದು, ಆಹಾರದ ಬೇಡಿಕೆ ಕಡಿಮೆಯಾಗಿದೆ. ಇನ್ನೂ ಕೆಲವರು ವಾಪಸ್ ಊರಿಗೆ ಹೋಗಿ ಅಲ್ಲಿಂದಲೇ ಕೆಲಸ ಮಾಡುತ್ತಿದ್ದಾರೆ.</p>.<p>‘ಬೆಂಗಳೂರಿನಲ್ಲಿ 15 ಸಾವಿರ ಪಿ.ಜಿಗಳಿದ್ದು, 3,600 ನೋಂದಣಿ ಆಗಿವೆ. ಈ ಪಿ.ಜಿಗಳಿಗೆ ಆದ್ಯತೆ ಮೇಲೆ ಸಿಲಿಂಡರ್ ವಿತರಿಸುವಂತೆ ಆಹಾರ ಇಲಾಖೆ ಸಚಿವರಿಗೆ ಮನವಿ ಮಾಡಲಾಗಿದೆ’ ಎಂದು ಬೆಂಗಳೂರು ಪಿಜಿ ಮಾಲೀಕರ ಕಲ್ಯಾಣ ಸಂಘದ ಅಧ್ಯಕ್ಷ ಡಿ.ಟಿ.ಅರುಣ್ ಕುಮಾರ್ ತಿಳಿಸಿದರು.</p>.<p>‘ಕೇಂದ್ರವು ಶೇಕಡ 20ರಷ್ಟು ವಾಣಿಜ್ಯ ಬಳಕೆ ಸಿಲಿಂಡರ್ ಪೂರೈಕೆ ಮಾಡುವುದಾಗಿ ಭರವಸೆ ನೀಡಿದೆ. ಅದರಂತೆ ವಿತರಣೆ ಆದಲ್ಲಿ ಎರಡು ವಾರಗಳಿಂದ ಸತತ ನಷ್ಟ, ವಹಿವಾಟು ಕುಸಿತದಿಂದ ಕಂಗೆಟ್ಟಿರುವ ಹೋಟೆಲ್ ಉದ್ಯಮಿಗಳಿಗೆ ಇದು ಆಸರೆಯಾಗಲಿದೆ. ಸಿಲಿಂಡರ್ ವಿತರಣೆ ಹೆಚ್ಚಾದಲ್ಲಿ ಮೊದಲಿನಂತೆ ಊಟ, ಖಾದ್ಯ ತಯಾರಿಸಲು ಸಾಧ್ಯ’ ಎಂದು ಹೋಟೆಲ್ ಮಾಲೀಕ ಗಿರೀಶ್ ತಿಳಿಸಿದರು.</p>.<p><strong>‘ಶೇಕಡ 50ರಷ್ಟು ಸಿಲಿಂಡರ್ ಪೂರೈಸಲಿ’</strong> </p><p>ಎರಡು ವಾರಗಳಿಂದ ಹೋಟೆಲ್ ಉದ್ಯಮಕ್ಕೆ ₹150 ಕೋಟಿಗೂ ಅಧಿಕ ನಷ್ಟ ಉಂಟಾಗಿದೆ. ಸೋಮವಾರದಿಂದ ವಾಣಿಜ್ಯ ಬಳಕೆ ಸಿಲಿಂಡರ್ ಪೂರೈಸುವುದಾಗಿ ಸರ್ಕಾರ ಭರವಸೆ ನೀಡಿದೆ. ಸಿಲಿಂಡರ್ ಪೂರೈಕೆ ಶೇಕಡ 33ರಷ್ಟು ಆಗಬಹುದು. ಸಿಲಿಂಡರ್ ದೊರೆತರೆ ಹೋಟೆಲ್ಗಳು ಎಂದಿನಂತೆ ಕಾರ್ಯನಿರ್ವಹಿಸುತ್ತವೆ. ಹೋಟೆಲ್ಗಳಿಗೆ ಶೇಕಡ 50ರಷ್ಟು ಎಲ್ಪಿಜಿ ಸಿಲಿಂಡರ್ ಪೂರೈಸುವಂತೆ ಕೇಂದ್ರಕ್ಕೆ ಪತ್ರ ಬರೆಯಲಾಗಿದೆ. ಸದ್ಯ ಶೇಕಡ 2ರಷ್ಟು ಪ್ರಮಾಣದ ಅನಿಲ ಸಿಲಿಂಡರ್ ಪೂರೈಸಲಾಗುತ್ತಿದೆ. </p><p><strong>-ಪಿ.ಸಿ.ರಾವ್ ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಗೌರವಾಧ್ಯಕ್ಷ</strong> </p>.<p> <strong>- ಸಿಹಿ ವಿತರಿಸಿ ಪ್ರತಿಭಟನೆ</strong></p><p> ಎಲ್ಪಿಜಿ ಸಿಲಿಂಡರ್ ಪೂರೈಕೆ ಮಾಡುವಂತೆ ಆಗ್ರಹಿಸಿ ರಾಜಾಜಿನಗರದಲ್ಲಿ ಬೇಕರಿ ಹಾಗೂ ಕಾಂಡಿಮೆಂಟ್ಸ್ ಮಾಲೀಕರು ಪ್ರತಿಭಟನೆ ನಡೆಸಿದರು. ಖಾಲಿ ಸಿಲಿಂಡರ್ಗಳಿಗೆ ಹೂವಿನ ಹಾರ ಹಾಕಿ ಸೌದೆ ಒಲೆಯಲ್ಲಿ ಸಿಹಿ ತಯಾರಿಸಿ ಗ್ರಾಹಕರಿಗೆ ವಿತರಿಸಿ ವಿನೂತನವಾಗಿ ಪ್ರತಿಭಟಿಸಿದರು. ‘ಸಿಲಿಂಡರ್ ಪೂರೈಸಿ ನಷ್ಟ ತಪ್ಪಿಸಿ. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಜೀವನ ನಡೆಸುವುದು ಕಷ್ಟ’ ಎಂದು ಪ್ರತಿಭಟನಕಾರರು ಅಲವತ್ತುಕೊಂಡರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ವಾಣಿಜ್ಯ ಬಳಕೆಯ ಸಿಲಿಂಡರ್ಗಳ ಅಭಾವ ತೀವ್ರವಾಗಿದ್ದು, ಹೋಟೆಲ್ ಉದ್ಯಮಕ್ಕೆ ದೊಡ್ಡ ಹೊಡೆತ ಬಿದ್ದಿದೆ. ದಿನೇ ದಿನೇ ಸಿಲಿಂಡರ್ ಸಮಸ್ಯೆ ಉಲ್ಬಣಿಸುತ್ತಿದ್ದು, ಹೋಟೆಲ್ ವ್ಯವಹಾರ ಶೇಕಡ 40ರಷ್ಟು ಕುಸಿದಿದೆ.</p>.<p>ದುಪ್ಪಟ್ಟು ಹಣ ನೀಡಿದರೂ ಸಿಲಿಂಡರ್ ಸಿಗದ ಕಾರಣ ಹಲವು ಹೋಟೆಲ್, ದರ್ಶನಿ, ರೆಸ್ಟೋರೆಂಟ್, ಢಾಬಾಗಳು ಬಂದ್ ಆಗಿವೆ. ಇದರ ಹೊರತಾಗಿಯೂ ಕೆಲವು ಹೋಟೆಲ್ನವರು ಇಂಡಕ್ಷನ್ ಸ್ಟೌ, ಸೌದೆ ಒಲೆ, ಎಲೆಕ್ಟ್ರಿಕ್ ಸ್ಟೌ ಸಹಿತ ಪರ್ಯಾಯ ವ್ಯವಸ್ಥೆ ಮಾಡಿಕೊಂಡು ದಿನದೂಡುತ್ತಿದ್ದಾರೆ.</p>.<p>ಮೆನುವಿನಲ್ಲಿ ಕೆಲವೊಂದು ಖಾದ್ಯಗಳನ್ನು ಕಡಿತಗೊಳಿಸಿ, ಸೀಮಿತ ಪ್ರಮಾಣದಲ್ಲಿ ಆಹಾರ ವಿತರಿಸಲಾಗುತ್ತಿದೆ. ಮೂರು ವಾರಗಳಿಂದ ಹಲವು ಹೋಟೆಲ್ಗಳು ನಷ್ಟದಲ್ಲೇ ನಡೆಯುತ್ತಿವೆ. ಬೆಂಗಳೂರು ಹೋಟೆಲ್ಗಳ ಸಂಘದ ಪ್ರಕಾರ ಎರಡು ವಾರದಲ್ಲಿ ₹150 ಕೋಟಿಗೂ ಅಧಿಕ ನಷ್ಟ ಉಂಟಾಗಿದೆ.</p>.<p>ಸಿಲಿಂಡರ್ ಸಮಸ್ಯೆಯಿಂದಾಗಿ ಹೋಟೆಲ್ಗಳ ಅಗ್ನಿ ಆರಿದೆ. ಬಾಣಲೆಗಳು ತಣ್ಣಗಾಗಿವೆ. ಸಿಲಿಂಡರ್ ಸಿಕ್ಕರೆ ಸಾಕು ಎಂಬ ನಿರೀಕ್ಷೆಯಲ್ಲೇ ದಿನ ಕಳೆಯುತ್ತಿರುವ ಹೋಟೆಲ್ ಮಾಲೀಕರು ಒಂದು ಕಡೆ, ಗ್ರಾಹರಿಗೆ ಊಟ–ತಿಂಡಿ ಸಿಗದ ನಿರಾಸೆ ಇನ್ನೊಂದು ಕಡೆ. ಈ ಮಧ್ಯೆ ಹೋಟೆಲ್ ಕಾರ್ಮಿಕರಿಗೆ ಭವಿಷ್ಯದ ಚಿಂತೆ ಕಾಡುತ್ತಿದೆ.</p>.<p>ಬೆಂಗಳೂರು ನಗರದಲ್ಲಿ 40 ಸಾವಿರಕ್ಕೂ ಅಧಿಕ ಹೋಟೆಲ್ಗಳಿವೆ. ಸಾರ್ವಜನಿಕರು, ಆಟೊ–ಟ್ಯಾಕ್ಸಿ ಚಾಲಕರು, ಆನ್ಲೈನ್ ಡೆಲಿವರಿ ನೌಕರರು, ಕಟ್ಟಡ ನಿರ್ಮಾಣ ಕಾರ್ಮಿಕರು, ಆಸ್ಪತ್ರೆಗಳ ರೋಗಿಗಳು, ಅವಿವಾಹಿತರು, ಹಿರಿಯ ನಾಗರಿಕರು , ಪೇಯಿಂಗ್ ಗೆಸ್ಟ್ಗಳಲ್ಲಿ ವಾಸವಾಗಿರುವವರು ನಿತ್ಯ ಹೋಟೆಲ್ಗಳನ್ನು ಅವಲಂಬಿಸಿದ್ದಾರೆ. ಗ್ಯಾಸ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿರುವ ಕಾರಣ 40 ಸಾವಿರ ಹೋಟೆಲ್ ಉದ್ಯಮಿಗಳು, ಆರು ಲಕ್ಷಕ್ಕೂ ಹೆಚ್ಚು ನೌಕರರಿಗೆ ಸಮಸ್ಯೆ ಉಂಟಾಗಿದೆ.</p>.<p>ಹೋಟೆಲ್ ಎದುರು ‘ಸಿಲಿಂಡರ್ ಕೊರತೆ, ಗ್ರಾಹಕರು ಸಹಕರಿಸಿ’ ಎಂಬ ಫಲಕಗಳು ಕಂಡುಬರುತ್ತಿವೆ. ಹತ್ತಾರು ಖಾದ್ಯಗಳನ್ನು ಮಾಡುತ್ತಿದ್ದ ಹೋಟೆಲ್ಗಳಲ್ಲಿ ಈಗ ಉಪ್ಪಿಟ್ಟು, ರೈಸ್ ಬಾತ್, ಕೇಸರಿಭಾತ್ ಮಾತ್ರ ತಯಾರಿಸಲಾಗುತ್ತಿದೆ. ನಗರದಲ್ಲಿ ವಾರಾಂತ್ಯದಲ್ಲಿ ಗ್ರಾಹಕರಿಂದ ತುಂಬಿರುತ್ತಿದ್ದ ರಾಜಾಜಿನಗರ, ಮಲ್ಲೇಶ್ವರ, ವಿಜಯನಗರ, ಬಸವೇಶ್ವರ ನಗರ, ಜಯನಗರದ ಹಲವು ಹೋಟೆಲ್ಗಳು ಮುಚ್ಚಿವೆ. ವಿಶೇಷವಾಗಿ ಮಾಂಸಾಹಾರಿ ಹೋಟೆಲ್ಗಳಲ್ಲಿ ಎಂದಿನ ಜನಜಂಗುಳಿ ಇರಲಿಲ್ಲ. ಅಡುಗೆ ಅನಿಲ ಹೆಚ್ಚು ಬಳಕೆಯಾಗುವ ಪದಾರ್ಥಗಳ ತಯಾರಿಕೆಯನ್ನೇ ಕೈ ಬಿಟ್ಟಿದ್ದಾರೆ.</p>.<p>‘ಸಣ್ಣ, ಮಧ್ಯಮ, ದೊಡ್ಡ ಹೋಟೆಲ್ಗಳಲ್ಲಿ ಸೌದೆ ಬಳಸಲಾಗುತ್ತಿದೆ. ಹಾಗಾಗಿ ಸೌದೆಗೆ ಬೇಡಿಕೆ ಹೆಚ್ಚಾಗಿ, ಅವುಗಳ ಬೆಲೆಯಲ್ಲೂ ಏರಿಕೆಯಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ನಗರಕ್ಕೆ ಸೌದೆ ತರಿಸಲಾಗುತ್ತಿದೆ. ಕ್ವಿಂಟಲ್ಗೆ ₹3,500ಕ್ಕೆ ಸಿಗುತ್ತಿದ್ದ ಸೌದೆ, ಈಗ ₹5 ಸಾವಿದರಿಂದ ₹8 ಸಾವಿರಕ್ಕೆ ಏರಿಕೆಯಾಗಿದೆ. ಎಲ್ಪಿಜಿ ಸಿಲಿಂಡರ್ಗಳಲ್ಲಿ ಅಡುಗೆ ಮಾಡಿ ರೂಢಿಯಾಗಿದ್ದ ಸಿಬ್ಬಂದಿಯು, ಈಗ ಸೌದೆ ಒಲೆಯಲ್ಲಿ ಅಡುಗೆ ತಯಾರಿಸಲು ಕಷ್ಟಪಡುತ್ತಿದ್ದಾರೆ. ಸಿಲಿಂಡರ್ ಕೊರತೆ ಯಾವತ್ತೂ ಆಗಿರಲಿಲ್ಲ’ ಎಂದು ಹೋಟೆಲ್ ಮಾಲೀಕರು ಹೇಳಿದರು.</p>.<p>‘ಗ್ಯಾಸ್ ಸ್ಟೌಗಳಲ್ಲಿ ಒಂದೆರೆಡು ತಾಸುಗಳಲ್ಲಿ ಅಡುಗೆಗಳು ತಯಾರಾಗುತ್ತಿದ್ದವು. ಆದರೆ, ಈಗ ಹೆಚ್ಚು ಸಮಯ ತೆಗೆದುಕೊಳ್ಳುತ್ತಿದೆ. ₹2 ಸಾವಿರಕ್ಕೆ ಸಿಗುತ್ತಿದ್ದ ಸೌದೆ ಒಲೆಗಳು, ಈಗ ₹4 ಸಾವಿರದಿಂದ ₹5 ಸಾವಿರಕ್ಕೆ ಹೆಚ್ಚಳವಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು. </p>.<p>‘ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆ ₹1,800. ಆದರೆ, ಕಾಳಸಂತೆಯಲ್ಲಿ ₹7 ಸಾವಿರದಿಂದ ₹8 ಸಾವಿರಕ್ಕೆ ಮಾರಾಟ ಮಾಡಲಾಗುತ್ತಿದೆ. ಯುದ್ಧ ಆರಂಭವಾದ ಬಳಿಕ ಏಜೆನ್ಸಿಯವರು ಮೊಬೈಲ್ ಕರೆ ಸ್ವೀಕರಿಸುತ್ತಿಲ್ಲ. ಕಾಫಿ–ಟೀ ಅಂಗಡಿ, ಪಾನಿಪುರಿ, ಗೋಬಿ ಮಂಚೂರಿ ಅಂಗಡಿಗಳು ಬಂದ್ ಆಗಿವೆ. ಸಣ್ಣ ಮತ್ತು ಮಧ್ಯಮ ಹೋಟಲ್ಗಳ ಮಾಲೀಕರು ದುಬಾರಿ ಹಣ ಕೊಟ್ಟು ಸಿಲಿಂಡರ್ ಖರೀದಿಸಲು ಸಾಧ್ಯವೇ ’ ಎಂದು ಜಾಲಹಳ್ಳಿ ಕ್ರಾಸ್ ಬಳಿಯ ಹೋಟೆಲ್ ಮಾಲೀಕ ರವಿ ಪ್ರಶ್ನಿಸಿದರು.</p>.<p>ಪೇಯಿಂಗ್ ಗೆಸ್ಟ್ಗಳಲ್ಲಿ (ಪಿ.ಜಿ) ಸ್ವಲ್ಪ ಮಟ್ಟಿಗೆ ಚೇತರಿಕೆ ಕಾಣುತ್ತಿದೆ. ಮೂರು ಹೊತ್ತಿನ ಬದಲು ಎರಡು ಹೊತ್ತಿನ ಊಟ ನೀಡಲಾಗುತ್ತಿದೆ. ಕೆಲ ಮಂದಿ ಮನೆಯಿಂದಲೇ ಕೆಲಸ ಮಾಡುತ್ತಿದ್ದು, ಆಹಾರದ ಬೇಡಿಕೆ ಕಡಿಮೆಯಾಗಿದೆ. ಇನ್ನೂ ಕೆಲವರು ವಾಪಸ್ ಊರಿಗೆ ಹೋಗಿ ಅಲ್ಲಿಂದಲೇ ಕೆಲಸ ಮಾಡುತ್ತಿದ್ದಾರೆ.</p>.<p>‘ಬೆಂಗಳೂರಿನಲ್ಲಿ 15 ಸಾವಿರ ಪಿ.ಜಿಗಳಿದ್ದು, 3,600 ನೋಂದಣಿ ಆಗಿವೆ. ಈ ಪಿ.ಜಿಗಳಿಗೆ ಆದ್ಯತೆ ಮೇಲೆ ಸಿಲಿಂಡರ್ ವಿತರಿಸುವಂತೆ ಆಹಾರ ಇಲಾಖೆ ಸಚಿವರಿಗೆ ಮನವಿ ಮಾಡಲಾಗಿದೆ’ ಎಂದು ಬೆಂಗಳೂರು ಪಿಜಿ ಮಾಲೀಕರ ಕಲ್ಯಾಣ ಸಂಘದ ಅಧ್ಯಕ್ಷ ಡಿ.ಟಿ.ಅರುಣ್ ಕುಮಾರ್ ತಿಳಿಸಿದರು.</p>.<p>‘ಕೇಂದ್ರವು ಶೇಕಡ 20ರಷ್ಟು ವಾಣಿಜ್ಯ ಬಳಕೆ ಸಿಲಿಂಡರ್ ಪೂರೈಕೆ ಮಾಡುವುದಾಗಿ ಭರವಸೆ ನೀಡಿದೆ. ಅದರಂತೆ ವಿತರಣೆ ಆದಲ್ಲಿ ಎರಡು ವಾರಗಳಿಂದ ಸತತ ನಷ್ಟ, ವಹಿವಾಟು ಕುಸಿತದಿಂದ ಕಂಗೆಟ್ಟಿರುವ ಹೋಟೆಲ್ ಉದ್ಯಮಿಗಳಿಗೆ ಇದು ಆಸರೆಯಾಗಲಿದೆ. ಸಿಲಿಂಡರ್ ವಿತರಣೆ ಹೆಚ್ಚಾದಲ್ಲಿ ಮೊದಲಿನಂತೆ ಊಟ, ಖಾದ್ಯ ತಯಾರಿಸಲು ಸಾಧ್ಯ’ ಎಂದು ಹೋಟೆಲ್ ಮಾಲೀಕ ಗಿರೀಶ್ ತಿಳಿಸಿದರು.</p>.<p><strong>‘ಶೇಕಡ 50ರಷ್ಟು ಸಿಲಿಂಡರ್ ಪೂರೈಸಲಿ’</strong> </p><p>ಎರಡು ವಾರಗಳಿಂದ ಹೋಟೆಲ್ ಉದ್ಯಮಕ್ಕೆ ₹150 ಕೋಟಿಗೂ ಅಧಿಕ ನಷ್ಟ ಉಂಟಾಗಿದೆ. ಸೋಮವಾರದಿಂದ ವಾಣಿಜ್ಯ ಬಳಕೆ ಸಿಲಿಂಡರ್ ಪೂರೈಸುವುದಾಗಿ ಸರ್ಕಾರ ಭರವಸೆ ನೀಡಿದೆ. ಸಿಲಿಂಡರ್ ಪೂರೈಕೆ ಶೇಕಡ 33ರಷ್ಟು ಆಗಬಹುದು. ಸಿಲಿಂಡರ್ ದೊರೆತರೆ ಹೋಟೆಲ್ಗಳು ಎಂದಿನಂತೆ ಕಾರ್ಯನಿರ್ವಹಿಸುತ್ತವೆ. ಹೋಟೆಲ್ಗಳಿಗೆ ಶೇಕಡ 50ರಷ್ಟು ಎಲ್ಪಿಜಿ ಸಿಲಿಂಡರ್ ಪೂರೈಸುವಂತೆ ಕೇಂದ್ರಕ್ಕೆ ಪತ್ರ ಬರೆಯಲಾಗಿದೆ. ಸದ್ಯ ಶೇಕಡ 2ರಷ್ಟು ಪ್ರಮಾಣದ ಅನಿಲ ಸಿಲಿಂಡರ್ ಪೂರೈಸಲಾಗುತ್ತಿದೆ. </p><p><strong>-ಪಿ.ಸಿ.ರಾವ್ ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಗೌರವಾಧ್ಯಕ್ಷ</strong> </p>.<p> <strong>- ಸಿಹಿ ವಿತರಿಸಿ ಪ್ರತಿಭಟನೆ</strong></p><p> ಎಲ್ಪಿಜಿ ಸಿಲಿಂಡರ್ ಪೂರೈಕೆ ಮಾಡುವಂತೆ ಆಗ್ರಹಿಸಿ ರಾಜಾಜಿನಗರದಲ್ಲಿ ಬೇಕರಿ ಹಾಗೂ ಕಾಂಡಿಮೆಂಟ್ಸ್ ಮಾಲೀಕರು ಪ್ರತಿಭಟನೆ ನಡೆಸಿದರು. ಖಾಲಿ ಸಿಲಿಂಡರ್ಗಳಿಗೆ ಹೂವಿನ ಹಾರ ಹಾಕಿ ಸೌದೆ ಒಲೆಯಲ್ಲಿ ಸಿಹಿ ತಯಾರಿಸಿ ಗ್ರಾಹಕರಿಗೆ ವಿತರಿಸಿ ವಿನೂತನವಾಗಿ ಪ್ರತಿಭಟಿಸಿದರು. ‘ಸಿಲಿಂಡರ್ ಪೂರೈಸಿ ನಷ್ಟ ತಪ್ಪಿಸಿ. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಜೀವನ ನಡೆಸುವುದು ಕಷ್ಟ’ ಎಂದು ಪ್ರತಿಭಟನಕಾರರು ಅಲವತ್ತುಕೊಂಡರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>