‘ಬಸವನಗುಡಿಯ ಈ ಭಾಗದಲ್ಲಿ ಪದವಿ ಕಾಲೇಜು ಇಲ್ಲ. ಸರ್ಕಾರದಿಂದ ಅನುದಾನ ಬಿಡುಗಡೆಯಾಗಿದ್ದು, ಬಿ.ಕಾಂ ಹಾಗೂ ಬಿಸಿಎ ಪದವಿ ಕಾಲೇಜು ಆರಂಭಿಸಲಾಗುತ್ತಿದೆ. ಶಾಲೆಯ ಕಟ್ಟಡದಲ್ಲಿ ಈ ತರಗತಿಗಳು ನಡೆಯುತ್ತಿವೆ. ಅದರ ಬದಲು ಮೈದಾನದ ಪಕ್ಕದಲ್ಲೇ ಇರುವ ಬಿಬಿಎಂಪಿ ಜಾಗದಲ್ಲಿ ಕೊಠಡಿಗಳನ್ನು ನಿರ್ಮಿಸಲಾಗುತ್ತಿದೆ. ಜೊತೆಗೆ ಈ ಮೈದಾನವನ್ನು ಅತ್ಯಾಧುನಿಕವಾಗಿ ಅಭಿವೃದ್ಧಿ ಮಾಡಲಾಗುತ್ತಿದೆ’ ಎಂದು ರವಿಸುಬ್ರಮಣ್ಯ ವಿವರ ನೀಡಿದರು.