ಮೈಸೂರು ಶಾಖೆಯ ವ್ಯವಸ್ಥಾಪಕ ಎಂ.ದಿಲೀಪಕುಮಾರ್ ಮತ್ತು ಸಿಬ್ಬಂದಿ ಮಲ್ಲೇಶ್ ಅವರು ಮಾರ್ಚ್ 30ರಂದು ಅನಿರೀಕ್ಷಿತವಾಗಿ ಈ ಎರಡೂ ಬ್ಯಾಂಕುಗಳಿಗೆ ಭೇಟಿ ನೀಡಿ, ಎಟಿಎಂ ಯಂತ್ರ ಪರಿಶೀಲಿಸಿದಾಗ ಹಣ ಕಡಿಮೆ ಇರುವುದು ಬೆಳಕಿಗೆ ಬಂದಿದೆ. ಕೂಡಲೇ ದಿಲೀಪಕುಮಾರ್ ಅವರು ಕಂಪನಿಯ ರಾಜ್ಯ ಮೇಲ್ವಿಚಾರಕ ಇಂದ್ರಕುಮಾರ ಅವರಿಗೆ ಮಾಹಿತಿ ನೀಡಿದರು. ಜತೆಗೆ, ಪೊಲೀಸರಿಗೆ ದೂರು ನೀಡಿದ್ದಾರೆ.