’2ನೇ ವರ್ಷದ ದನಗಳ ಜಾತ್ರೆ ಇದಾಗಿದ್ದು, ಗೊಲ್ಲಹಳ್ಳಿ, ಹೆಸರಘಟ್ಟ, ಹೊಸಹಳ್ಳಿ ಪಾಳ್ಯ, ಗೋಪಾಲಪುರ, ಕುಕ್ಕನಹಳ್ಳಿ, ಹುಸ್ಕೂರು ಗ್ರಾಮಗಳ ರೈತರು ಭಾಗವಹಿಸಿದ್ದಾರೆ. ಮಂಡ್ಯ, ಮೈಸೂರು, ಚನ್ನರಾಯನಪಟ್ಟಣಗಳಿಂದ ಬಂದ ರೈತರು ರಾಸುಗಳನ್ನು ಖರೀದಿ ಮಾಡಿದ್ದಾರೆ. ಈ ಭಾಗದ ರೈತರು ಹಸುಗಳ ಸಾಕಾಣಿಕೆಯಲ್ಲಿ ಮುಂಚೂಣಿಯಲ್ಲಿದ್ದಾರೆ. ಇದರಿಂದ ಇಲ್ಲಿಯ ಹಸುಗಳಿಗೆ ಉತ್ತಮ ಬೆಲೆ ನೀಡುತ್ತಾರೆ. ಮುಂದಿನ ವರ್ಷ ದನಗಳ ಜಾತ್ರೆಯನ್ನು ಐದು ದಿನ ನಡೆಸುವ ಆಲೋಚನೆ ಇದೆ‘ ಎಂದು ಹಿತಚಿಂತನಾ ಟ್ರಸ್ಟ್ ಅಧ್ಯಕ್ಷ ರಾಮಸ್ವಾಮಿ ತಿಳಿಸಿದರು.