ಚೆನ್ನೈ: ಮದುರೆ ಜಿಲ್ಲೆಯ ಮೆಲೂರಿನಲ್ಲಿ ಮಾರ್ಚ್ 15ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಹೊಸ ಪಕ್ಷದ ಘೋಷಣೆ ಮತ್ತು ಪಕ್ಷದ ಧ್ವಜ ಅನಾವರಣಗೊಳಿಸಲಾಗು
ವುದು ಎಂದು ಎಐಎಡಿಎಂಕೆ ಉಚ್ಚಾಟಿತ ನಾಯಕ ಟಿ.ಟಿ.ವಿ. ದಿನಕರನ್ ಭಾನುವಾರ ಹೇಳಿದ್ದಾರೆ.
ನಟ ಕಮಲಹಾಸನ್ ಅವರು ಹೊಸ ರಾಜಕೀಯ ಪಕ್ಷ ಘೋಷಣೆ ಮಾಡಿದ ಕೆಲ ವಾರಗಳ ಅಂತರದಲ್ಲೇ ದಿನಕರನ್ ಈ ಘೋಷಣೆ ಮಾಡಿದ್ದಾರೆ.