‘ಭಾಷಾವಾರು ಪ್ರಾಂತ್ಯ ರಚನೆ ಆದಾಗಿನಿಂದ ಶಿವಸೇನೆಯಂಥ ಸಂಘಟನೆಗಳು ಹಾಗೂ ಅಲ್ಲಿನ ಸರ್ಕಾರಗಳು, ಬೆಳಗಾವಿ ಮತ್ತಿತರ ಗಡಿ ಪ್ರದೇಶಗಳು ತಮಗೆ ಸೇರಬೇಕು ಎಂದು ಆಗಾಗ ಕೂಗು ಹಾಕುತ್ತಲೇ ಇವೆ. ಕರ್ನಾಟಕ, ಮಹಾರಾಷ್ಟ್ರ ಮತ್ತು ಕೇರಳ ಗಡಿ ವಿವಾದ ಬಗೆಹರಿಸಲು 1960ರ ದಶಕದಲ್ಲಿ ರಚನೆಯಾಗಿದ್ದ ನ್ಯಾಯಮೂರ್ತಿ ಮಹಾಜನ್ ಆಯೋಗವು ‘ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ’ ಎಂಬುದಾಗಿ ಸಾರಿದೆ’ ಎಂದಿದ್ದಾರೆ.