ಬೆಂಗಳೂರು: ಮಲ್ಲೇಶ್ವರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ₹10 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಉಪಮುಖ್ಯಮಂತ್ರಿ ಸಿ.ಎನ್.ಅಶ್ವತ್ಥನಾರಾಯಣ ಶನಿವಾರ ಚಾಲನೆ ನೀಡಿದರು.
ಮತ್ತಿಕೆರೆಯ ಉಪವಿಭಾಗದಲ್ಲಿ ಸುಮಾರು ₹2.90 ಕೋಟಿ ವೆಚ್ಚದಲ್ಲಿ ಆರ್.ಕೆ.ಉದ್ಯಾನ, ಅಟಲ್ಜಿ ಉದ್ಯಾನ, 16ನೇ ಕ್ರಾಸ್ ಉದ್ಯಾನ, ಸ್ಯಾಂಕಿ ಕೆರೆ ಎದುರಿನ ಉದ್ಯಾನ, ಕೆಂಪೇಗೌಡ ಗೋಪುರ ಉದ್ಯಾನದ ವಿವಿಧ ಆಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತದೆ. .
ಮಲ್ಲೇಶ್ವರದ 18ನೇ ಕ್ರಾಸ್ನಲ್ಲಿರುವ ಆಟದ ಮೈದಾನವನ್ನು ಸುಮಾರು ₹16.77 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಶಿವಾಜಿ ಪಾರ್ಕ್ ₹2.41 ಕೋಟಿ ಕಾಮಗಾರಿಗೆ, ಮಲ್ಲೇಶ್ವರ ಉಪ ವಿಭಾಗದಲ್ಲಿ 2.96 ಕೋಟಿಗೂ ಹೆಚ್ಚು ಮೊತ್ತದ ಕಾಮಗಾರಿಗಳು ನಡೆಯಲಿವೆ.