<p><strong>ಬೆಂಗಳೂರು:</strong> ತೋಟದ ಬೆಳೆಗಾರರ ಸಹಕಾರಿ ಮಾರಾಟ ಮತ್ತು ಸಂಸ್ಕರಣ ಸಂಘವು (ಹಾಪ್ಕಾಮ್ಸ್) ಅಂಚೆ ಇಲಾಖೆ ಇಲಾಖೆ ಸಹಯೋಗದಲ್ಲಿ ‘ರೈತ ಅಂಚೆ’ ಆನ್ಲೈನ್ ಮಾರಾಟ ಜಾಲವನ್ನು ವಿಸ್ತರಿಸಿದ್ದು, ವಿವಿಧ ತಳಿಯ ಮಾವಿನ ಹಣ್ಣುಗಳನ್ನು ಮನೆಯಲ್ಲಿಯೇ ಕುಳಿತು ಖರೀದಿಸುವ ಅವಕಾಶ ಕಲ್ಪಿಸಿದೆ. </p>.<p>ಗ್ರಾಹಕರು <strong><a href="https://hopcomsbengaluru.com/">https://hopcomsbengaluru.com/</a></strong> ಮೂಲಕ ಮಾವಿನ ಹಣ್ಣುಗಳನ್ನು ಆಯ್ಕೆ ಮಾಡಿ, ಹಣ ಪಾವತಿಸಿದಲ್ಲಿ 24 ಗಂಟೆಯೊಳಗೆ ಹಣ್ಣು ನಿಗದಿತ ವಿಳಾಸಕ್ಕೆ ತಲುಪಲಿದೆ. ಪ್ರಸ್ತುತ ಮಾವಿನ ಮೇಳ ಪ್ರಾರಂಭವಾಗಿರುವುದರಿಂದ ನೈಸರ್ಗಿಕವಾಗಿ ಮಾಗಿದ ವಿವಿಧ ತಳಿಯ ಮಾವಿನ ಹಣ್ಣುಗಳು ತಲಾ 3 ಕೆ.ಜಿ., 5 ಕೆ.ಜಿ. ಬಾಕ್ಸ್ಗಳಲ್ಲಿ ಲಭ್ಯ ಇವೆ. ಗ್ರಾಹಕರು ಆನ್ಲೈನ್ ಮೂಲಕ ಖರೀದಿಸಬಹುದು ಎಂದು ಹಾಪ್ಕಾಮ್ಸ್ ಅಧ್ಯಕ್ಷ ಎ.ಎಸ್. ಚಂದ್ರೇಗೌಡ ಹಾಗೂ ವ್ಯವಸ್ಥಾಪಕ ನಿರ್ದೇಶಕ ಮಿರ್ಜಿ ಉಮೇಶ ಶಂಕರ ತಿಳಿಸಿದ್ದಾರೆ. </p>.<p>ಪ್ರತಿನಿತ್ಯ ಸದಸ್ಯ ರೈತರಿಂದ ಖರೀದಿಸಿದ ತಾಜಾ ಹಣ್ಣು, ತರಕಾರಿಗಳು ಮಾರಾಟಕ್ಕೆ ಲಭ್ಯವಿರುತ್ತವೆ. ಈ ವೇದಿಕೆಯ ನೆರವಿನಿಂದ ಹೆಚ್ಚು ಖರೀದಿಸಿದಷ್ಟು ರೈತರು ಹಾಗೂ ಗ್ರಾಹಕರಿಗೆ ಅನುಕೂಲವಾಗುತ್ತದೆ ಎಂದು ಹೇಳಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ತೋಟದ ಬೆಳೆಗಾರರ ಸಹಕಾರಿ ಮಾರಾಟ ಮತ್ತು ಸಂಸ್ಕರಣ ಸಂಘವು (ಹಾಪ್ಕಾಮ್ಸ್) ಅಂಚೆ ಇಲಾಖೆ ಇಲಾಖೆ ಸಹಯೋಗದಲ್ಲಿ ‘ರೈತ ಅಂಚೆ’ ಆನ್ಲೈನ್ ಮಾರಾಟ ಜಾಲವನ್ನು ವಿಸ್ತರಿಸಿದ್ದು, ವಿವಿಧ ತಳಿಯ ಮಾವಿನ ಹಣ್ಣುಗಳನ್ನು ಮನೆಯಲ್ಲಿಯೇ ಕುಳಿತು ಖರೀದಿಸುವ ಅವಕಾಶ ಕಲ್ಪಿಸಿದೆ. </p>.<p>ಗ್ರಾಹಕರು <strong><a href="https://hopcomsbengaluru.com/">https://hopcomsbengaluru.com/</a></strong> ಮೂಲಕ ಮಾವಿನ ಹಣ್ಣುಗಳನ್ನು ಆಯ್ಕೆ ಮಾಡಿ, ಹಣ ಪಾವತಿಸಿದಲ್ಲಿ 24 ಗಂಟೆಯೊಳಗೆ ಹಣ್ಣು ನಿಗದಿತ ವಿಳಾಸಕ್ಕೆ ತಲುಪಲಿದೆ. ಪ್ರಸ್ತುತ ಮಾವಿನ ಮೇಳ ಪ್ರಾರಂಭವಾಗಿರುವುದರಿಂದ ನೈಸರ್ಗಿಕವಾಗಿ ಮಾಗಿದ ವಿವಿಧ ತಳಿಯ ಮಾವಿನ ಹಣ್ಣುಗಳು ತಲಾ 3 ಕೆ.ಜಿ., 5 ಕೆ.ಜಿ. ಬಾಕ್ಸ್ಗಳಲ್ಲಿ ಲಭ್ಯ ಇವೆ. ಗ್ರಾಹಕರು ಆನ್ಲೈನ್ ಮೂಲಕ ಖರೀದಿಸಬಹುದು ಎಂದು ಹಾಪ್ಕಾಮ್ಸ್ ಅಧ್ಯಕ್ಷ ಎ.ಎಸ್. ಚಂದ್ರೇಗೌಡ ಹಾಗೂ ವ್ಯವಸ್ಥಾಪಕ ನಿರ್ದೇಶಕ ಮಿರ್ಜಿ ಉಮೇಶ ಶಂಕರ ತಿಳಿಸಿದ್ದಾರೆ. </p>.<p>ಪ್ರತಿನಿತ್ಯ ಸದಸ್ಯ ರೈತರಿಂದ ಖರೀದಿಸಿದ ತಾಜಾ ಹಣ್ಣು, ತರಕಾರಿಗಳು ಮಾರಾಟಕ್ಕೆ ಲಭ್ಯವಿರುತ್ತವೆ. ಈ ವೇದಿಕೆಯ ನೆರವಿನಿಂದ ಹೆಚ್ಚು ಖರೀದಿಸಿದಷ್ಟು ರೈತರು ಹಾಗೂ ಗ್ರಾಹಕರಿಗೆ ಅನುಕೂಲವಾಗುತ್ತದೆ ಎಂದು ಹೇಳಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>