ರಸ್ತೆ ವಿಸ್ತರಣೆಗಾಗಿ ಕಡಿಯಲಾಗುವ ಮರಗಳ ಚಿತ್ರಗಳನ್ನು ಹಂಚಿಕೊಂಡಿದ್ದ ಟ್ವಿಟ್ಟಿಗರು, ‘ಬೆಂಗಳೂರಿನಲ್ಲಿ ಶೇ 70ರಷ್ಟು ಹಸಿರು ಇತ್ತು. ಈಗ ಅದರ ಪ್ರಮಾಣ ಶೇ 3ಕ್ಕೆ ಇಳಿದಿದೆ. ತಲೆಬುಡವಿಲ್ಲದ ಅನ್ನಷ್ಟು ಯೋಜನೆಗಳಿಂದಾಗಿ ನಗರದ ಹಸಿರು ಇನ್ನಷ್ಟು ಅಪಾಯ ಎದುರಿಸುತ್ತಿದೆ. ಅಳಿದುಳಿದ ಮರಗಳನ್ನು ಉಳಿಸಿಕೊಳ್ಳದಿದ್ದರೆ, ನಗರದಲ್ಲಿ ಒಂದೇ ಒಂದು ಮರವೂ ಇರುವುದಿಲ್ಲ’ ಎಂದು ಟ್ವೀಟ್ ಮಾಡಿದ್ದಾರೆ.