ಬೆಂಗಳೂರು: ಸುಬ್ರಹ್ಮಣ್ಯನಗರದ ಪಾನ್ ಅಂಗಡಿಯೊಂದರಲ್ಲಿ ಮಾರು ತ್ತಿದ್ದಚಾಕೊಲೇಟ್ಗಳಲ್ಲಿ ಗಾಂಜಾ ಅಂಶವಿರುವುದು ಪತ್ತೆಯಾಗಿದ್ದು, ದಾಳಿ ನಡೆಯುತ್ತಿದ್ದಂತೆ ಅಂಗಡಿ ಮಾಲೀಕ ಗುಲಾಬ್ ಯಾದವ್ ಎಂಬಾತ ಪರಾರಿಯಾಗಿದ್ದಾನೆ.
‘ಗಾಂಜಾ ಮಿಶ್ರಿತ ಚಾಕೊಲೇಟ್ ಮಾರಾಟ ಬಗ್ಗೆ ಮಾಹಿತಿ ಇತ್ತು. ಅಬ ಕಾರಿ ಇಲಾಖೆ ಉತ್ತರ ವಿಭಾಗದ ಜಂಟಿ ಆಯುಕ್ತ ನಾಗರಾಜಪ್ಪ ನೇತೃತ್ವದ ತಂಡ, ಅಂಗಡಿ ಮೇಲೆ ದಾಳಿ ಮಾಡಿ 20 ಸಾವಿರ ಮೌಲ್ಯದ ಚಾಕೊಲೇಟ್ಗಳನ್ನು ಜಪ್ತಿ ಮಾಡಿದೆ’ ಎಂದು ಅಬಕಾರಿ ಪೊಲೀಸ್ ಮೂಲಗಳು ತಿಳಿಸಿವೆ.
‘ಉತ್ತರ ಪ್ರದೇಶದಿಂದ ಬೆಂಗಳೂ ರಿಗೆ ಚಾಕೊಲೇಟ್ ಪೂರೈಕೆಯಾಗುತ್ತಿತು. ಒಂದರ ಬೆಲೆ ₹ 50 ಇತ್ತು. ಈ ರೀತಿ ಚಾಕೊಲೇಟ್ಗಳನ್ನು ಇದೇ ಮೊದಲ ಬಾರಿಗೆ ಜಪ್ತಿ ಮಾಡಲಾಗಿದೆ. ಬೇರೆ ಯಾವೆಲ್ಲ ಸ್ಥಳದಲ್ಲಿ ಇಂಥ ಚಾಕೊಲೇಟ್ ಮಾರುತ್ತಿದ್ದಾರೆಂಬ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿದೆ’ ಎಂದೂ ಹೇಳಿವೆ.