ಕೆಲ ಕ್ಷೇತ್ರಗಳನ್ನು ನಿಗೂಢವಾಗಿಯೇ ಇಟ್ಟರೆ, ಅವು ಜನರಲ್ಲಿನ ಸಾಮರಸ್ಯವನ್ನು ಒಡೆಯುವ ಪಿತೂರಿ ನಡೆಸುವವರಿಗೆ ಸಹಕಾರಿಯಾಗುತ್ತವೆ. ಅದನ್ನು ಹೋಗ ಲಾಡಿಸಲು, ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಂದೇಹಗಳ ಗೋಡೆಗಳನ್ನು ಕೆಡವಿ ಹೃದಯಗಳನ್ನು ಬೆಸೆಯುವ ಪ್ರಯತ್ನ ನಮ್ಮದಾಗಿದೆ ಎಂದು ವಿವರಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮುಹಮ್ಮದ್ ನವಾಝ್, ಫಿರೋಝ್ ಖಾನ್, ಅಫ್ಸರ್ ಅಹ್ಮದ್, ನವೀದ್ ಇರ್ಫಾನ್, ತೌಸೀಫ್ ಅಹ್ಮದ್ ಉಪಸ್ಥಿತರಿದ್ದರು.