‘ತಾಯಿ ಎಂಬುದು ಪ್ರೀತಿ ಸೂಚಕ. ಪ್ರೀತಿ ಹಂಚುವ ಯಾರನ್ನೇ ಆದರೂ ತಾಯಿ ಎಂದು ಪರಿಗಣಿಸಬಹುದು. ಮೀನಾಕ್ಷಿ ಭಟ್ ಅವರದು ವಿಶಾಲ ಹೃದಯದ ತಾಯಿ ಪ್ರೀತಿ’ ಎಂದು ಶ್ಲಾಘಿಸಿದರು. ಆತ್ಮಕಥೆಯ ಕುರಿತು ಪರಿಚಯಿಸಿದ ವಿಮರ್ಶಕಿ ವಿನಯಾ ವಕ್ಕುಂದ, ‘ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಮಹಿಳೆಯರ ಬದುಕಿನ ಚಿತ್ರಣ ಕಟ್ಟಿಕೊಡುವ ಪ್ರಯತ್ನದಲ್ಲಿ ಹರಿವ ನದಿ ಯಶಸ್ವಿಯಾಗಿದೆ. ಯಾತನೆಯ ಕಥನ ಇದಲ್ಲ. ಹೆಣ್ಣಿನ ಜೀವನವೂ ನದಿಯಂತೆ ಎಂಬುದನ್ನು ಪ್ರಾಮಾಣಿಕವಾಗಿ ಅಕ್ಷರರೂಪದಲ್ಲಿ ಅಚ್ಚೊತ್ತಲಾಗಿದೆ’ ಎಂದರು.