ಗುರುವಾರ ಸ್ಥಳಕ್ಕೆ ಭೇಟಿ ನೀಡಿದ ಬಿಎಂಆರ್ಸಿಎಲ್ ಅಧಿಕಾರಿಗಳು, ಪರಿಸ್ಥಿತಿ ಅವಲೋಕಿಸಿದರು. ಪಾದಚಾರಿಗಳ ಸುರಕ್ಷತೆ ದೃಷ್ಟಿಯಿಂದ ಶಿಥಿಲಗೊಂಡಿದ್ದ ಕಾಂಪೌಂಡ್ನ ಒಂದು ಭಾಗವನ್ನು ತೆರವುಗೊಳಿಸಲಾಗಿದೆ. ಮೆಟ್ರೊ ರೈಲು ಕಾಮಗಾರಿ ಆರಂಭವಾದಾಗ 12 ವರ್ಷಗಳ ಹಿಂದೆ ನಿರ್ಮಿಸಿದ್ದ ಗೋಡೆ ಕುಸಿದಿದೆ. ‘ಮುಖ್ಯವಾದ ತಡೆಗೋಡೆ ಹಾಗೆಯೇ ಉಳಿದಿದೆ. ಮೆಟ್ರೊ ರೈಲಗಳ ಮೇಲೆ ಕಲ್ಲು ತೂರುವ ಘಟನೆಗಳು ಸಂಭವಿಸಿದ ಬಳಿಕ ಕಾಂಪೌಂಡ್ಗೆ ಜಾಲರಿ ಅಳವಡಿಸಲಾಗಿತ್ತು’ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.