‘ಎದುರಿಗೆ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಪ್ರತಿಮೆ, ಅಕ್ಕಪಕ್ಕದಲ್ಲಿ ಕಬ್ಬನ್ ಪಾರ್ಕ್ನ ಬಾಲಭವನ, ಚರ್ಚ್, ಉಪಪೊಲೀಸ್ ಅಧೀಕ್ಷಕರ ಕಚೇರಿ(ಕೇಂದ್ರ) ಇವೆ. ಯಾವುದೇ ಧಾರ್ಮಿಕ ಅಥವಾ ಶೈಕ್ಷಣಿಕ ಸಂಸ್ಥೆ, ಆಸ್ಪತ್ರೆ, ಸರ್ಕಾರಿ ಕಚೇರಿ, ವಸತಿ ಪ್ರದೇಶಗಳ 100 ಮೀಟರ್ ಅಂತರದಲ್ಲಿ ಮದ್ಯದ ಮಳಿಗೆ ತೆರೆಯಲು ಅನುಮತಿ ನೀಡುವಂತಿಲ್ಲ’ ಎಂದು ವಕೀಲ ಎ.ವಿ. ಅಮರನಾಥನ್ ಪಿಐಎಲ್ ಸಲ್ಲಿಸಿದ್ದರು.