‘ಈ ವಾರ್ಡ್ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿದೆ.2006ರಲ್ಲಿ ಬಿಬಿಎಂಪಿಯವರು ಇಲ್ಲಿಮನೆಗಳನ್ನು ಧ್ವಂಸಗೊಳಿಸಿದ್ದರು.ಆದರೆ, ನಾವು ಹೋರಾಟ ಮಾಡಿದ್ದರಿಂದ ಮತ್ತೆ ಆಶ್ರಯ ನೀಡಲಾಯಿತು. ಈ ಪ್ರದೇಶವನ್ನು ಕೊಳೆಗೇರಿ ಎಂದು ಘೋಷಿಸಲಾಗಿದ್ದು, ಸಂಬಂಧಿಸಿದ ಅಧಿಕೃತ ದಾಖಲೆಗಳು ಶೀಘ್ರದಲ್ಲಿ ಕೈ ಸೇರಲಿವೆ. ಎರಡು ಸಾವಿರ ಜನರಿದ್ದಾರೆ. ಮತದಾರರ ಗುರುತಿನ ಚೀಟಿ, ಪಡಿತರ ಚೀಟಿ ಎಲ್ಲವನ್ನೂ ನೀಡಿದ್ದಾರೆ. ಆದರೂ, ಆಶಾ ಸುರೇಶ್ ಬೆಂಬಲಿಗರು ಈ ಜಾಗದ ಮೇಲೆ ಕಣ್ಣಿಟ್ಟಿದ್ದಾರೆ’ ಎಂದು ಬಿಎಸ್ಪಿ ರಾಜ್ಯ ಘಟಕದ ಉಸ್ತುವಾರಿ ಮಾರಸಂದ್ರ ಮುನಿಯಪ್ಪ ದೂರಿದರು.