‘ಯುವತಿ ಪೋಷಕರು ಹಾಲು ಮಾರಾಟ ಮಳಿಗೆ ಇಟ್ಟುಕೊಂಡಿದ್ದಾರೆ. ಇದೇ 21ರಂದು ಬೆಳಿಗ್ಗೆ ಮಳಿಗೆಗೆ ಹೋಗಿದ್ದ ಅಶೋಕ ಹಾಲು ಖರೀದಿಸಿದ್ದ. ಹಣ ಕೇಳಿದ್ದಕ್ಕಾಗಿ ಯುವತಿ ಕೈ ಹಿಡಿದು ಅನುಚಿತವಾಗಿ ವರ್ತಿಸಿದ್ದ. ‘ನಾನು ಮುಖ್ಯಮಂತ್ರಿ ಕುಲ ಬಾಂಧವ. ಹಣ ಕೇಳಿದರೆ ಜೈಲಿಗೆ ಹಾಕಿಸುತ್ತೇನೆ’ ಎಂದೂ ಬೆದರಿಕೆ ಹಾಕಿದ್ದ’ ಎಂದು ತಿಳಿಸಿದರು.