ಚಿತ್ರಕಲಾ ಪರಿಷತ್ ಅಧ್ಯಕ್ಷ ಬಿ.ಎಲ್.ಶಂಕರ್ ಮಾತನಾಡಿ, ‘ಮುಖ್ಯಮಂತ್ರಿ’ ಚಂದ್ರು ಅವರು ರಂಗಭೂಮಿ ಹಾಗೂ ಚಲನಚಿತ್ರ ಕ್ಷೇತ್ರವನ್ನು ಶ್ರೀಮಂತಗೊಳಿಸಿದವರು. ಅನೇಕ ಪ್ರಯೋಗ ಮಾಡಿದ್ಧಾರೆ. ತಮ್ಮ ಕೃತಿಯಲ್ಲಿ ಯಾವುದನ್ನೂ ಬಚ್ಚಿಡದೇ ಎಲ್ಲ ವಿಚಾರವನ್ನೂ ದಾಖಲಿಸಿದ್ದಾರೆ’ ಎಂದು ಹೇಳಿದರು.ಜಯದೇವ ಆಸ್ಪತ್ರೆ ನಿರ್ದೇಶಕ ಡಾ.ಮಂಜುನಾಥ್ ಅವರು ಮಾತನಾಡಿ, ‘ನಿಜವಾದ ಭಾರತದ ದರ್ಶನ ಆಗಬೇಕಿದ್ದರೆ ರೈಲಿನಲ್ಲಿ ಪ್ರಯಾಣ ಮಾಡಬೇಕು. ಅಲ್ಲಿ ಕಾಣುವ ಭಾರತ ಹಸಿವು, ಬಡತನದ್ದು’ ಎಂದು ವಿಷಾದಿಸಿದರು.