ಯಲಹಂಕ: ಹುಣಸಮಾರನಹಳ್ಳಿ ಕೆರೆಯನ್ನು ಸಾರ್ವಜನಿಕರಿಗೆ ಸಮರ್ಪಣೆ ಮಾಡುವ ಹಾಗೂ ವನಮಹೋತ್ಸವ ಕಾರ್ಯಕ್ರಮಕ್ಕೆ ಶಾಸಕ ಕೃಷ್ಣ ಬೈರೇಗೌಡ ಚಾಲನೆ ನೀಡಿದರು.
ಬಳಿಕಮಾತನಾಡಿದ ಅವರು,‘ಈ ಜಾಗದಲ್ಲಿ ಅನುಪಯುಕ್ತ ಗಿಡಗಳು ಮತ್ತು ಪೊದೆಗಳು ಬೆಳೆದುಕೊಂಡು, ಪಾಳುಬಿದ್ದ ಪ್ರದೇಶವಾಗಿತ್ತು. ಕೆರೆ ಅಂಗಳದ ಜಾಗವನ್ನು ಸಮತಟ್ಟು ಮಾಡಿ, ಕಳೆ ತೆರವುಗೊಳಿಸಲಾಯಿತು. ಸಣ್ಣ ನೀರಾವರಿ ಇಲಾಖೆಯಿಂದ ₹30 ಲಕ್ಷ ವೆಚ್ಛದಲ್ಲಿ ಕೆರೆ ಅಭಿವೃದ್ಧಿಪಡಿಸಲಾಗಿದೆ’ ಎಂದರು.
‘ಕೆರೆಯ ಸುತ್ತ ನಡಿಗೆ ಪಥ ನಿರ್ಮಿಸಲಾಗಿದೆ. ಕಿರು ಉದ್ಯಾನ ಅಭಿವೃದ್ಧಿಪಡಿಸಿ, ಗಿಡ ನೆಡಬೇಕೆಂದು ಐಟಿಸಿ ಕಂಪನಿಯವರಿಗೆ ಮನವಿ ಮಾಡಲಾಗಿತ್ತು. ಅದರಂತೆ ಅವರು ₹25 ಲಕ್ಷ ಮಂಜೂರು ಮಾಡಿದರು. ಸುಮಾರು 900 ಗಿಡಗಳನ್ನು ನೆಟ್ಟು, ನಿರ್ವಹಣೆಯ ಜವಾಬ್ದಾರಿಯನ್ನೂ ವಹಿಸಿಕೊಂಡಿರುವುದು ಶ್ಲಾಘನೀಯ’ ಎಂದರು.