‘ಸಚಿವರ ಬಳಿ ಶಿಫಾರಸು ಪತ್ರಕ್ಕೆ ಸಹಿ ಹಾಕಿಸಿ, ಅನುದಾನ ಮುಂಜೂರಾದರೆ ₹ 10 ಸಾವಿರ ಕೊಡುವುದಾಗಿ ಪರಿಚಯಸ್ಥನಾಗಿರುವ ಶಿವರಾಜು ಮತ್ತು ಆತನ ಸ್ನೇಹಿತ ಆಮಿಷ ಒಡ್ಡಿದ್ದರು. ಹಣದ ಅಗತ್ಯದಿಂದ ಈ ಕೆಲಸಕ್ಕೆ ಒಪ್ಪಿಕೊಂಡೆ ಎಂದು ವಿಚಾರಣೆ ವೇಳೆ ಆರೋಪಿ ಹೇಳಿದ್ದಾನೆ. ಆತನ ಹೇಳಿಕೆ ನಿಜವೇ ಎಂಬ ಬಗ್ಗೆ ಪರಿಶೀಲಿಸಲಾಗುತ್ತಿದೆ’ ಎಂದೂ ಅವರು ಹೇಳಿದರು.