<p><strong>ಪೀಣ್ಯ ದಾಸರಹಳ್ಳಿ:</strong> ಬಾಗಲಗುಂಟೆ ವಾರ್ಡ್ ಸೌಂದರ್ಯ ಬಡಾವಣೆಯ ಅನೇಕ ಕುಂದು ಕೊರತೆಗಳನ್ನು ಬಗೆಹರಿಸಲು ಎಲ್ಲಾ ವಿಭಾಗದ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿದ ಶಾಸಕ ಎಸ್. ಮುನಿರಾಜು, ಅಗತ್ಯ ಪರಿಹಾರ ಕ್ರಮ ಕೈಗೊಳ್ಳಲು ಸೂಚಿಸಿದರು.</p>.<p>ಸೌಂದರ್ಯ ಬಡಾವಣೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ನೀಡಿದ ದೂರಿನ ಮೇರೆಗೆ ಮುನಿರಾಜು ಸಭೆ ನಡೆಸಿದರು.</p>.<p>‘ಬೀದಿ ನಾಯಿ ಮತ್ತು ಕೋತಿಗಳ ಹಾವಳಿ, ಕಸದ ಸಮಸ್ಯೆ ತೀವ್ರವಾಗಿದೆ. ಮನೆ ಕಟ್ಟುವವರು ಚರಂಡಿಯಲ್ಲಿ ಮಣ್ಣು ಸುರಿಯುವುದನ್ನು ನಿಲ್ಲಿಸಬೇಕು. ವಾಹನಗಳಿಗೆ ಅಡ್ಡಿಪಡಿಸುವ ಮರದ ಕೊಂಬೆಗಳ ಕತ್ತರಿಸಬೇಕು, ಪ್ರಕೃತಿ ಬಡಾವಣೆಯಲ್ಲಿನ ಚರಂಡಿಯ ನೀರು ಸೌಂದರ್ಯ ಬಡಾವಣೆಗೆ ಬರುತ್ತಿದ್ದು, ಅದನ್ನು ನಿಲ್ಲಿಸಬೇಕು. ವ್ಹೀಲಿ ಮಾಡುವವರಿಗೆ ಕಡಿವಾಣ ಹಾಕಬೇಕು, ಬೀದಿದೀಪದ ಸಮಸ್ಯೆಗಳನ್ನು ಪರಿಹರಿಸಬೇಕು’ ಎಂದು ನಾಗರಿಕರು ಮನವಿ ಮಾಡಿದರು.</p>.<p>‘ಜಲ್ಲಿಕಲ್ಲು ಮತ್ತು ಮರಳು ತುಂಬಿದ ಲಾರಿಗಳನ್ನು ಹೆದ್ದಾರಿಯಲ್ಲಿ ತಡೆಗಟ್ಟುವುದರಿಂದ ಈ ಬಡಾವಣೆಯ ಮಾರ್ಗವಾಗಿ ಅವು ಚಲಿಸಿ ರಸ್ತೆ ಹಾಳು ಮಾಡುತ್ತಿವೆ. ಅಂತಹ ಲಾರಿಗಳಿಗೆ ಕಡಿವಾಣ ಹಾಕಬೇಕು’ ಎಂಬ ನಿವಾಸಿಗಳ ಮನವಿಗೆ ಸ್ಪಂದಿಸಿದ ಮುನಿರಾಜು, ಈ ಬಗ್ಗೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.</p>.<p>ಚಿಕ್ಕಬಾಣಾವರ ಸಂಚಾರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಕೇಶವಮೂರ್ತಿ, ಎಂಜಿನಿಯರ್ಗಳಾದ ಐಶ್ವರ್ಯ, ಮಂಜೇಗೌಡ, ದರ್ಶನ್, ಅರಣ್ಯ ಇಲಾಖೆಯ ರಾಜಪ್ಪ, ಚಿಕ್ಕಣ್ಣ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪೀಣ್ಯ ದಾಸರಹಳ್ಳಿ:</strong> ಬಾಗಲಗುಂಟೆ ವಾರ್ಡ್ ಸೌಂದರ್ಯ ಬಡಾವಣೆಯ ಅನೇಕ ಕುಂದು ಕೊರತೆಗಳನ್ನು ಬಗೆಹರಿಸಲು ಎಲ್ಲಾ ವಿಭಾಗದ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿದ ಶಾಸಕ ಎಸ್. ಮುನಿರಾಜು, ಅಗತ್ಯ ಪರಿಹಾರ ಕ್ರಮ ಕೈಗೊಳ್ಳಲು ಸೂಚಿಸಿದರು.</p>.<p>ಸೌಂದರ್ಯ ಬಡಾವಣೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ನೀಡಿದ ದೂರಿನ ಮೇರೆಗೆ ಮುನಿರಾಜು ಸಭೆ ನಡೆಸಿದರು.</p>.<p>‘ಬೀದಿ ನಾಯಿ ಮತ್ತು ಕೋತಿಗಳ ಹಾವಳಿ, ಕಸದ ಸಮಸ್ಯೆ ತೀವ್ರವಾಗಿದೆ. ಮನೆ ಕಟ್ಟುವವರು ಚರಂಡಿಯಲ್ಲಿ ಮಣ್ಣು ಸುರಿಯುವುದನ್ನು ನಿಲ್ಲಿಸಬೇಕು. ವಾಹನಗಳಿಗೆ ಅಡ್ಡಿಪಡಿಸುವ ಮರದ ಕೊಂಬೆಗಳ ಕತ್ತರಿಸಬೇಕು, ಪ್ರಕೃತಿ ಬಡಾವಣೆಯಲ್ಲಿನ ಚರಂಡಿಯ ನೀರು ಸೌಂದರ್ಯ ಬಡಾವಣೆಗೆ ಬರುತ್ತಿದ್ದು, ಅದನ್ನು ನಿಲ್ಲಿಸಬೇಕು. ವ್ಹೀಲಿ ಮಾಡುವವರಿಗೆ ಕಡಿವಾಣ ಹಾಕಬೇಕು, ಬೀದಿದೀಪದ ಸಮಸ್ಯೆಗಳನ್ನು ಪರಿಹರಿಸಬೇಕು’ ಎಂದು ನಾಗರಿಕರು ಮನವಿ ಮಾಡಿದರು.</p>.<p>‘ಜಲ್ಲಿಕಲ್ಲು ಮತ್ತು ಮರಳು ತುಂಬಿದ ಲಾರಿಗಳನ್ನು ಹೆದ್ದಾರಿಯಲ್ಲಿ ತಡೆಗಟ್ಟುವುದರಿಂದ ಈ ಬಡಾವಣೆಯ ಮಾರ್ಗವಾಗಿ ಅವು ಚಲಿಸಿ ರಸ್ತೆ ಹಾಳು ಮಾಡುತ್ತಿವೆ. ಅಂತಹ ಲಾರಿಗಳಿಗೆ ಕಡಿವಾಣ ಹಾಕಬೇಕು’ ಎಂಬ ನಿವಾಸಿಗಳ ಮನವಿಗೆ ಸ್ಪಂದಿಸಿದ ಮುನಿರಾಜು, ಈ ಬಗ್ಗೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.</p>.<p>ಚಿಕ್ಕಬಾಣಾವರ ಸಂಚಾರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಕೇಶವಮೂರ್ತಿ, ಎಂಜಿನಿಯರ್ಗಳಾದ ಐಶ್ವರ್ಯ, ಮಂಜೇಗೌಡ, ದರ್ಶನ್, ಅರಣ್ಯ ಇಲಾಖೆಯ ರಾಜಪ್ಪ, ಚಿಕ್ಕಣ್ಣ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>