ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಚಾರಣಾಧೀನ ಕೈದಿಗಾಗಿ ನೀಡಲು ತಂದಿದ್ದ ಮೊಬೈಲ್ ಜಪ್ತಿ

Last Updated 26 ಜನವರಿ 2023, 20:07 IST
ಅಕ್ಷರ ಗಾತ್ರ

ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ವಿಚಾರಣಾಧೀನ ಮಹಿಳಾ ಕೈದಿಯೊಬ್ಬರಿಗೆ ನೀಡಲು ತಂದಿದ್ದ ಮೊಬೈಲ್ ಜಪ್ತಿ ಮಾಡಲಾಗಿದ್ದು, ಎಫ್‌ಐಆರ್ ದಾಖಲಾಗಿದೆ.

‘ವಿಚಾರಣಾಧೀನ ಕೈದಿ ಜಯಮ್ಮ ಎಂಬುವವರನ್ನು ಭೇಟಿಯಾಗಲು ಬಂದಿದ್ದ ರಾಮನಗರದ ಗುರು ಲಕ್ಷ್ಮಮ್ಮ ಎಂಬುವವರ ಬ್ಯಾಗ್‌ನಲ್ಲಿ ಮೊಬೈಲ್ ಪತ್ತೆಯಾಗಿದೆ. ಈ ಬಗ್ಗೆ ಜೈಲಿನ ಸಿಬ್ಬಂದಿ ದೂರು ನೀಡಿದ್ದಾರೆ. ಜಯಮ್ಮ ಹಾಗೂ ಗುರು ಲಕ್ಷ್ಮಮ್ಮ ಇಬ್ಬರ ವಿರುದ್ಧವೂ ಪ್ರಕರಣ ದಾಖಲಿಸಿಕೊಳ್ಳಲಾ ಗಿದೆ’ ಎಂದು ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಹೇಳಿದರು.

‘ಜ. 23ರಂದು ಮಧ್ಯಾಹ್ನ ಗುರು ಲಕ್ಷ್ಮಮ್ಮ ಜೈಲಿಗೆ ಬಂದಿದ್ದರು. ಬ್ಯಾಗ್‌ನಲ್ಲಿ ನೋಕಿಯಾ ಮೊಬೈಲ್, ಚಾರ್ಜರ್ ಹಾಗೂ ಇಯರ್ ಫೋನ್ ಇಟ್ಟುಕೊಂಡಿದ್ದರು. ಅದನ್ನು ಜಯಮ್ಮ ಅವರಿಗೆ ನೀಡುವುದು ಉದ್ದೇಶವಾಗಿತ್ತು. ಅನುಮಾನಗೊಂಡ ಸಿಬ್ಬಂದಿ, ಬ್ಯಾಗ್ ಪರಿಶೀಲಿಸಿದಾಗ ಮೊಬೈಲ್ ಪತ್ತೆಯಾಗಿದೆ’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT