<p><strong>ಬೆಂಗಳೂರು</strong>: ದುಪ್ಪಟ್ಟು ಹಣ ಮಾಡಿಕೊಡುವುದಾಗಿ ನಂಬಿಸಿ, ವಂಚಿಸುತ್ತಿದ್ದ ಮೂವರು ಆರೋಪಿಗಳನ್ನು ಬಾಗಲಗುಂಟೆ ಠಾಣೆಯ ಪೊಲೀಸರು ಬಂಧಿಸಿದ್ದಾರೆ.</p>.<p>ತುಮಕೂರು ಜಿಲ್ಲೆ ಮಧುಗಿರಿ ವಿಜಯ್ ಅಲಿಯಾಸ್ ರಾಜು (36), ನವೀನ್ (30) ಮತ್ತು ಚಿಕ್ಕಬಾಣಾವರದ ಕೆರೆಗುಡ್ಡದಹಳ್ಳಿ ನಿವಾಸಿ ಕೃಷ್ಣ ಸಿಂಗ್ (34) ಬಂಧಿತರು.</p>.<p>ಆರೋಪಿಗಳಿಂದ ₹40 ಲಕ್ಷ ನಗದು ಮತ್ತು ಒಂದು ಕಾರು ವಶಕ್ಕೆ ಪಡೆಯಲಾಗಿದೆ.</p>.<p>ಆರೋಪಿಗಳು ಕೊಪ್ಪಳದ ವ್ಯಕ್ತಿಯೊಬ್ಬರಿಗೆ ವಂಚಿಸಿದ್ದರು. ಅವರು ನೀಡಿದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.</p>.<p>‘ಒಂದು ಲಕ್ಷ ‘ಬಾರಿಷ್ ಮನಿ’ಗೆ ₹3 ಲಕ್ಷ ಸಾಮಾನ್ಯ ನೋಟುಗಳನ್ನು ಕೊಡುತ್ತೇನೆ’ ಎಂದು ನಂಬಿಸಿ ಹಣ ಪಡೆದು ವಂಚಸಿದ್ದರು ಎಂದು ಪೊಲೀಸರು ಹೇಳಿದರು.</p>.<p>ಆರೋಪಿಗಳ ಪೈಕಿ ವಿಜಯ್ ಮಧುಗಿರಿಯಲ್ಲಿ ಕೃಷಿ ಕೆಲಸ ಮಾಡಿಕೊಂಡಿದ್ದ. ಕೃಷ್ಣಸಿಂಗ್ ಢಾಬಾದಲ್ಲಿ ಕೆಲಸ ಮಾಡುತ್ತಿದ್ದ. ನವೀನ್ ಚಾಲಕನಾಗಿ ಕೆಲಸ ಮಾಡುತ್ತಿದ್ದ.</p>.<p>‘ವರ್ಷದ ಹಿಂದೆ ಆರೋಪಿ ವಿಜಯ್ ಗಾಂಧಿನಗರಕ್ಕೆ ಬಂದಿದ್ದ. ಆಗ ದೂರುದಾರರನ್ನು ಪರಿಚಯಿಸಿಕೊಂಡಿದ್ದು, ಇಬ್ಬರು ಆತ್ಮೀಯವಾಗಿದ್ದರು. ಕೆಲ ದಿನಗಳ ಹಿಂದೆ ದೂರುದಾರರಿಗೆ ಕರೆ ಮಾಡಿದ್ದ ವಿಜಯ್, ‘ತನ್ನ ಬಳಿ ಬಾರಿಷ್ ಮನಿ’ ಎಂಬ ನೋಟುಗಳಿದ್ದು, ಅವುಗಳು 9 ತಿಂಗಳ ಬಳಿಕ ಬಿಳಿ ಪೇಪರ್ ಆಗುತ್ತವೆ. ಹೀಗಾಗಿ, ₹1 ಲಕ್ಷ ನಗದು ಕೊಟ್ಟರೆ, ಅದಕ್ಕೆ ಪ್ರತಿಯಾಗಿ ₹3 ಲಕ್ಷ ‘ಬಾರಿಷ್ ಮನಿ’ ಕೊಡುತ್ತೇನೆ. ಅವುಗಳನ್ನು ಸಾಮಾನ್ಯ ನೋಟುಗಳಂತೆಯೇ ಚಲಾವಣೆ ಮಾಡಿಕೊಂಡು, ಲಾಭ ಪಡೆಯಬಹುದೆಂದು ನಂಬಿಸಿದ್ದ’ ಎಂದು ತನಿಖಾಧಿಕಾರಿಗಳು ತಿಳಿಸಿದರು.</p>.<p>8ನೇ ಮೈಲಿಯಲ್ಲಿ ಇರುವ ಹೋಟೆಲ್ವೊಂದಕ್ಕೆ ದೂರುದಾರ ಬಂದು ವಿಜಯ್ಗೆ ₹28.60 ಲಕ್ಷ ಕೊಟ್ಟಿದ್ದರು. ಆ ನಂತರ ಯಾವುದೇ ನೋಟುಗಳನ್ನು ಕೊಡದೆ ಪರಾರಿಯಾಗಿದ್ದ. ಅದಕ್ಕೆ ಇತರೆ ಇಬ್ಬರು ಆರೋಪಿಗಳು ಸಹಕಾರ ನೀಡಿದ್ದರು ಎಂದು ಪೊಲೀಸರು ಹೇಳಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ದುಪ್ಪಟ್ಟು ಹಣ ಮಾಡಿಕೊಡುವುದಾಗಿ ನಂಬಿಸಿ, ವಂಚಿಸುತ್ತಿದ್ದ ಮೂವರು ಆರೋಪಿಗಳನ್ನು ಬಾಗಲಗುಂಟೆ ಠಾಣೆಯ ಪೊಲೀಸರು ಬಂಧಿಸಿದ್ದಾರೆ.</p>.<p>ತುಮಕೂರು ಜಿಲ್ಲೆ ಮಧುಗಿರಿ ವಿಜಯ್ ಅಲಿಯಾಸ್ ರಾಜು (36), ನವೀನ್ (30) ಮತ್ತು ಚಿಕ್ಕಬಾಣಾವರದ ಕೆರೆಗುಡ್ಡದಹಳ್ಳಿ ನಿವಾಸಿ ಕೃಷ್ಣ ಸಿಂಗ್ (34) ಬಂಧಿತರು.</p>.<p>ಆರೋಪಿಗಳಿಂದ ₹40 ಲಕ್ಷ ನಗದು ಮತ್ತು ಒಂದು ಕಾರು ವಶಕ್ಕೆ ಪಡೆಯಲಾಗಿದೆ.</p>.<p>ಆರೋಪಿಗಳು ಕೊಪ್ಪಳದ ವ್ಯಕ್ತಿಯೊಬ್ಬರಿಗೆ ವಂಚಿಸಿದ್ದರು. ಅವರು ನೀಡಿದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.</p>.<p>‘ಒಂದು ಲಕ್ಷ ‘ಬಾರಿಷ್ ಮನಿ’ಗೆ ₹3 ಲಕ್ಷ ಸಾಮಾನ್ಯ ನೋಟುಗಳನ್ನು ಕೊಡುತ್ತೇನೆ’ ಎಂದು ನಂಬಿಸಿ ಹಣ ಪಡೆದು ವಂಚಸಿದ್ದರು ಎಂದು ಪೊಲೀಸರು ಹೇಳಿದರು.</p>.<p>ಆರೋಪಿಗಳ ಪೈಕಿ ವಿಜಯ್ ಮಧುಗಿರಿಯಲ್ಲಿ ಕೃಷಿ ಕೆಲಸ ಮಾಡಿಕೊಂಡಿದ್ದ. ಕೃಷ್ಣಸಿಂಗ್ ಢಾಬಾದಲ್ಲಿ ಕೆಲಸ ಮಾಡುತ್ತಿದ್ದ. ನವೀನ್ ಚಾಲಕನಾಗಿ ಕೆಲಸ ಮಾಡುತ್ತಿದ್ದ.</p>.<p>‘ವರ್ಷದ ಹಿಂದೆ ಆರೋಪಿ ವಿಜಯ್ ಗಾಂಧಿನಗರಕ್ಕೆ ಬಂದಿದ್ದ. ಆಗ ದೂರುದಾರರನ್ನು ಪರಿಚಯಿಸಿಕೊಂಡಿದ್ದು, ಇಬ್ಬರು ಆತ್ಮೀಯವಾಗಿದ್ದರು. ಕೆಲ ದಿನಗಳ ಹಿಂದೆ ದೂರುದಾರರಿಗೆ ಕರೆ ಮಾಡಿದ್ದ ವಿಜಯ್, ‘ತನ್ನ ಬಳಿ ಬಾರಿಷ್ ಮನಿ’ ಎಂಬ ನೋಟುಗಳಿದ್ದು, ಅವುಗಳು 9 ತಿಂಗಳ ಬಳಿಕ ಬಿಳಿ ಪೇಪರ್ ಆಗುತ್ತವೆ. ಹೀಗಾಗಿ, ₹1 ಲಕ್ಷ ನಗದು ಕೊಟ್ಟರೆ, ಅದಕ್ಕೆ ಪ್ರತಿಯಾಗಿ ₹3 ಲಕ್ಷ ‘ಬಾರಿಷ್ ಮನಿ’ ಕೊಡುತ್ತೇನೆ. ಅವುಗಳನ್ನು ಸಾಮಾನ್ಯ ನೋಟುಗಳಂತೆಯೇ ಚಲಾವಣೆ ಮಾಡಿಕೊಂಡು, ಲಾಭ ಪಡೆಯಬಹುದೆಂದು ನಂಬಿಸಿದ್ದ’ ಎಂದು ತನಿಖಾಧಿಕಾರಿಗಳು ತಿಳಿಸಿದರು.</p>.<p>8ನೇ ಮೈಲಿಯಲ್ಲಿ ಇರುವ ಹೋಟೆಲ್ವೊಂದಕ್ಕೆ ದೂರುದಾರ ಬಂದು ವಿಜಯ್ಗೆ ₹28.60 ಲಕ್ಷ ಕೊಟ್ಟಿದ್ದರು. ಆ ನಂತರ ಯಾವುದೇ ನೋಟುಗಳನ್ನು ಕೊಡದೆ ಪರಾರಿಯಾಗಿದ್ದ. ಅದಕ್ಕೆ ಇತರೆ ಇಬ್ಬರು ಆರೋಪಿಗಳು ಸಹಕಾರ ನೀಡಿದ್ದರು ಎಂದು ಪೊಲೀಸರು ಹೇಳಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>