ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಂಕ್ ಎದುರೇ ₹ 5 ಲಕ್ಷ ಕದ್ದ ದುಷ್ಕರ್ಮಿಗಳು

Last Updated 26 ಆಗಸ್ಟ್ 2019, 20:08 IST
ಅಕ್ಷರ ಗಾತ್ರ

ಬೆಂಗಳೂರು: ಮಹದೇವಪುರದಲ್ಲಿರುವ ‘ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ’ ಶಾಖೆ ಎದುರು ಸಂಜೀವ ರೆಡ್ಡಿ ಎಂಬುವರ ಗಮನ ಬೇರೆಡೆ ಸೆಳೆದಿದ್ದ ದುಷ್ಕರ್ಮಿಗಳು, ಅವರ ₹ 5 ಲಕ್ಷ ಕದ್ದೊಯ್ದಿದ್ದಾರೆ.

‘ಇದೇ 23ರಂದು ಬೆಳಿಗ್ಗೆ ಬ್ಯಾಂಕ್‌ಗೆ ಬಂದಿದ್ದ ಸಂಜೀವ್, ₹ 5 ಲಕ್ಷ ಹಣ ಡ್ರಾ ಮಾಡಿದ್ದರು. ಬ್ಯಾಂಕ್‌ನಿಂದ ಹೊರಗೆ ಬಂದು, ಬೈಕ್‌ನ ಪೆಟ್ರೋಲ್ ಟ್ಯಾಂಕ್‌ ಮೇಲೆ ಹಣದ ಬ್ಯಾಗ್ ಇಟ್ಟು ಹೆಲ್ಮೆಟ್, ಜರ್ಕಿನ್ ಹಾಕಿಕೊಳ್ಳುತ್ತಿದ್ದರು. ಅದೇ ವೇಳೆ ಬೆನ್ನು ತಟ್ಟಿದ್ದ ಅಪರಿಚಿತ, ನೋಟು ಬಿದ್ದಿರುವುದಾಗಿ ಹೇಳಿ ಗಮನ ಬೇರೆಡೆ ಸೆಳೆದಿದ್ದ. ಹಿಂದೆ ತಿರುಗಿ ನೋಡುವಷ್ಟರಲ್ಲೇ ಆರೋಪಿ ಹಣದ ಬ್ಯಾಗ್‌ ಕದ್ದುಕೊಂಡು ಪರಾರಿಯಾಗಿದ್ದಾನೆ’ ಎಂದು ಪೊಲೀಸರು ಹೇಳಿದರು.

ಘಟನೆ ಸಂಬಂಧ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT