‘ಒಂದು ವರ್ಷದಿಂದ ಬಾಲಕಿಯು ಮೂತ್ರಪಿಂಡ ವೈಫಲ್ಯ ಸಮಸ್ಯೆ ಎದುರಿಸುತ್ತಿದ್ದಳು. ಅವಳಿಗೆ ಡಯಾಲಿಸಿಸ್ ಮಾಡಲಾಗುತ್ತಿತ್ತು.ತ್ವರಿತವಾಗಿ ಮೂತ್ರಪಿಂಡ ಕಸಿ ಮಾಡದಿದ್ದರೆ ಬಾಲಕಿ ಮೃತಪಡುವ ಸಾಧ್ಯತೆ ಹೆಚ್ಚಿತ್ತು. ಮೂತ್ರಪಿಂಡ ದಾನಿಗಳ ಕೊರತೆಯಿಂದ ಕಸಿ ತಡವಾಗುವ ಸಾಧ್ಯತೆಯಿತ್ತು. ತಾಯಿಯೇ ಮೂತ್ರಪಿಂಡ ದಾನ ಮಾಡಿದ್ದರಿಂದ ಸಮಯಕ್ಕೆ ಸರಿಯಾಗಿ ಕಸಿ ಮಾಡಲು ಸಾಧ್ಯವಾಯಿತು’ ಎಂದುಆಸ್ಪತ್ರೆಯ ರೋಬೋಟಿಕ್ ಶಸ್ತ್ರಚಿಕಿತ್ಸೆ ಮತ್ತು ಕಸಿ ವಿಭಾಗದ ನಿರ್ದೇಶಕ ಡಾ. ಮೋಹನ್ ಕೇಶವ
ಮೂರ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.