<p><strong>ಬೆಂಗಳೂರು:</strong> ‘ಮನಸ್ಸು ಮತ್ತು ಹೃದಯವನ್ನು ಶ್ರೀಮಂತಗೊಳಿಸುವ ಸಾಹಿತ್ಯ ಬರಬೇಕು. ಇದರಿಂದ ದೇಶದಲ್ಲಿ ಶಾಂತಿ, ನೆಮ್ಮದಿ ನೆಲೆಸಲಿದೆ’ ಎಂದು ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು. </p>.<p>ಮೈಸೂರಿನ ಮುದ್ದುರಾಮ ಪ್ರತಿಷ್ಠಾನ, ಇಲ್ಲಿನ ಅಭಿನವ ಪ್ರಕಾಶನ ಹಾಗೂ ಭಾರತೀಯ ವಿದ್ಯಾಭವನ ಜಂಟಿಯಾಗಿ ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಾಹಿತಿ ಅ.ರಾ. ಮಿತ್ರ ಅವರಿಗೆ ‘ಮುದ್ದುರಾಮ ಪ್ರಶಸ್ತಿ’ ಪ್ರದಾನ ಮಾಡಿದರು. ಪ್ರಶಸ್ತಿಯು ₹ 50 ಸಾವಿರ ನಗದು ಹಾಗೂ ಪ್ರಶಸ್ತಿ ಫಲಕ ಒಳಗೊಂಡಿದೆ. ಇದೇ ವೇಳೆ ಮುದ್ದುರಾಮ ಚೌಪದಿಗಳ ಹತ್ತು ಸಂಪುಟಗಳು ಬಿಡುಗಡೆಯಾದವು. </p>.<p>ಈ ವೇಳೆ ಮಾತನಾಡಿದ ಸ್ವಾಮೀಜಿ ಅವರು, ‘ಮನುಷ್ಯನಲ್ಲಿ ಹಾಸ್ಯಪ್ರಜ್ಞೆ ಇರಬೇಕು. ಇದರಿಂದ ಜೀವನದಲ್ಲಿ ನೆಮ್ಮದಿ ಕಂಡುಕೊಳ್ಳಬಹುದು. ಸುಖ, ದುಃಖವನ್ನು ಸಮಾನವಾಗಿ ಕಂಡು ಸಾಗುವುದನ್ನು ರೂಢಿಸಿಕೊಳ್ಳಬೇಕು’ ಎಂದರು. </p>.<p>ಅ.ರಾ.ಮಿತ್ರ ಅವರ ಬಗ್ಗೆ ಮಾತನಾಡಿದ ವಾಗ್ಮಿ ಪ್ರೊ.ಎಂ.ಕೃಷ್ಣೇಗೌಡ, ‘ಮಿತ್ರ ಅವರು ನಿರ್ದಿಷ್ಟ ಗುರಿ, ಆದರ್ಶ ಇಟ್ಟುಕೊಂಡು ಬದುಕಿದ್ದಾರೆ. ಅವರ ವ್ಯಕ್ತಿತ್ವ ಘನವಾದದ್ದಾಗಿದೆ. ಬದುಕಿನ ಘನತೆಯ ಬಗ್ಗೆ ಅವರನ್ನು ನೋಡಿದಾಗ ವಿಶ್ವಾಸ ಬರುತ್ತದೆ’ ಎಂದು ಹೇಳಿದರು. </p>.<p>ಕೆ.ಸಿ.ಶಿವಪ್ಪ ಅವರ ‘ಮುದ್ದುರಾಮ ಚೌಪದಿ’ಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ವಾಗ್ಮಿ ಹಿರೇಮಗಳೂರು ಕಣ್ಣನ್, ‘ಈ ಸಂಪುಟಗಳು ಬದುಕಿನ ದರ್ಶನ ಮಾಡಿಸಲಿವೆ. ಸರಳ ಕನ್ನಡದಲ್ಲಿ ಸುಂದರ ನಿರೂಪಣೆ ಕಾಣಬಹುದು’ ಎಂದರು. </p>.<p>ಅ.ರಾ.ಮಿತ್ರ ಅವರು ತಮ್ಮ ಗುರು ಪ್ರಭುಶಂಕರ್ ಹಾಗೂ ಸ್ನೇಹಿತರನ್ನು ಸ್ಮರಿಸಿಕೊಂಡರು. ಶಿಕ್ಷಣ ತಜ್ಞ ಗುರುರಾಜ ಕರಜಗಿ, ಮಲ್ಲಯ್ಯ ಸ್ವಾಮೀಜಿ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿ.ಸೋಮಶೇಖರ್, ಭಾರತೀಯ ವಿದ್ಯಾಭವನದ ನಿರ್ದೇಶಕ ಎಚ್.ಎನ್. ಸುರೇಶ್, ಮುದ್ದುರಾಮ ಪ್ರತಿಷ್ಠಾನದ ಅಧ್ಯಕ್ಷ ಕೆ.ಸಿ. ಶಿವಪ್ಪ, ಸಹಕಾರ್ಯದರ್ಶಿ ಅಭಿನವ ರವಿಕುಮಾರ್ ಉಪಸ್ಥಿತರಿದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ‘ಮನಸ್ಸು ಮತ್ತು ಹೃದಯವನ್ನು ಶ್ರೀಮಂತಗೊಳಿಸುವ ಸಾಹಿತ್ಯ ಬರಬೇಕು. ಇದರಿಂದ ದೇಶದಲ್ಲಿ ಶಾಂತಿ, ನೆಮ್ಮದಿ ನೆಲೆಸಲಿದೆ’ ಎಂದು ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು. </p>.<p>ಮೈಸೂರಿನ ಮುದ್ದುರಾಮ ಪ್ರತಿಷ್ಠಾನ, ಇಲ್ಲಿನ ಅಭಿನವ ಪ್ರಕಾಶನ ಹಾಗೂ ಭಾರತೀಯ ವಿದ್ಯಾಭವನ ಜಂಟಿಯಾಗಿ ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಾಹಿತಿ ಅ.ರಾ. ಮಿತ್ರ ಅವರಿಗೆ ‘ಮುದ್ದುರಾಮ ಪ್ರಶಸ್ತಿ’ ಪ್ರದಾನ ಮಾಡಿದರು. ಪ್ರಶಸ್ತಿಯು ₹ 50 ಸಾವಿರ ನಗದು ಹಾಗೂ ಪ್ರಶಸ್ತಿ ಫಲಕ ಒಳಗೊಂಡಿದೆ. ಇದೇ ವೇಳೆ ಮುದ್ದುರಾಮ ಚೌಪದಿಗಳ ಹತ್ತು ಸಂಪುಟಗಳು ಬಿಡುಗಡೆಯಾದವು. </p>.<p>ಈ ವೇಳೆ ಮಾತನಾಡಿದ ಸ್ವಾಮೀಜಿ ಅವರು, ‘ಮನುಷ್ಯನಲ್ಲಿ ಹಾಸ್ಯಪ್ರಜ್ಞೆ ಇರಬೇಕು. ಇದರಿಂದ ಜೀವನದಲ್ಲಿ ನೆಮ್ಮದಿ ಕಂಡುಕೊಳ್ಳಬಹುದು. ಸುಖ, ದುಃಖವನ್ನು ಸಮಾನವಾಗಿ ಕಂಡು ಸಾಗುವುದನ್ನು ರೂಢಿಸಿಕೊಳ್ಳಬೇಕು’ ಎಂದರು. </p>.<p>ಅ.ರಾ.ಮಿತ್ರ ಅವರ ಬಗ್ಗೆ ಮಾತನಾಡಿದ ವಾಗ್ಮಿ ಪ್ರೊ.ಎಂ.ಕೃಷ್ಣೇಗೌಡ, ‘ಮಿತ್ರ ಅವರು ನಿರ್ದಿಷ್ಟ ಗುರಿ, ಆದರ್ಶ ಇಟ್ಟುಕೊಂಡು ಬದುಕಿದ್ದಾರೆ. ಅವರ ವ್ಯಕ್ತಿತ್ವ ಘನವಾದದ್ದಾಗಿದೆ. ಬದುಕಿನ ಘನತೆಯ ಬಗ್ಗೆ ಅವರನ್ನು ನೋಡಿದಾಗ ವಿಶ್ವಾಸ ಬರುತ್ತದೆ’ ಎಂದು ಹೇಳಿದರು. </p>.<p>ಕೆ.ಸಿ.ಶಿವಪ್ಪ ಅವರ ‘ಮುದ್ದುರಾಮ ಚೌಪದಿ’ಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ವಾಗ್ಮಿ ಹಿರೇಮಗಳೂರು ಕಣ್ಣನ್, ‘ಈ ಸಂಪುಟಗಳು ಬದುಕಿನ ದರ್ಶನ ಮಾಡಿಸಲಿವೆ. ಸರಳ ಕನ್ನಡದಲ್ಲಿ ಸುಂದರ ನಿರೂಪಣೆ ಕಾಣಬಹುದು’ ಎಂದರು. </p>.<p>ಅ.ರಾ.ಮಿತ್ರ ಅವರು ತಮ್ಮ ಗುರು ಪ್ರಭುಶಂಕರ್ ಹಾಗೂ ಸ್ನೇಹಿತರನ್ನು ಸ್ಮರಿಸಿಕೊಂಡರು. ಶಿಕ್ಷಣ ತಜ್ಞ ಗುರುರಾಜ ಕರಜಗಿ, ಮಲ್ಲಯ್ಯ ಸ್ವಾಮೀಜಿ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿ.ಸೋಮಶೇಖರ್, ಭಾರತೀಯ ವಿದ್ಯಾಭವನದ ನಿರ್ದೇಶಕ ಎಚ್.ಎನ್. ಸುರೇಶ್, ಮುದ್ದುರಾಮ ಪ್ರತಿಷ್ಠಾನದ ಅಧ್ಯಕ್ಷ ಕೆ.ಸಿ. ಶಿವಪ್ಪ, ಸಹಕಾರ್ಯದರ್ಶಿ ಅಭಿನವ ರವಿಕುಮಾರ್ ಉಪಸ್ಥಿತರಿದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>