‘ಬಿಹಾರದ ಸ್ನೇಹಿತ ಸಮೀರ್ಕುಮಾರ್ ಎಂಬಾತನೊಂದಿಗೆ ಸೇರಿಕೊಂಡು ಆಗಸ್ಟ್ 1ರಂದು ಮಲ್ಪೆಯ ಪ್ರವಾಸಕ್ಕೆ ಮೂವರೂ ಜೂಮ್ ಕಾರಿನಲ್ಲಿ ತೆರಳಿದ್ದರು. ಆಳ ಸಮುದ್ರಕ್ಕೆ ತಳ್ಳಿ ಕೊಲೆ ಮಾಡುವ ಯೋಜನೆಯಿತ್ತು. ಆದರೆ, ಆಗಸ್ಟ್ 2ರಂದು ಉಡುಪಿಯಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದರ ಪರಿಣಾಮ ಸಮುದ್ರಕ್ಕೆ ಇಳಿಯುವುದಕ್ಕೆ ನಿರ್ಬಂಧವಿತ್ತು. ತಕ್ಷಣವೇ ತಮ್ಮ ಯೋಜನೆ ಬದಲಾಯಿಸಿ ಬೆಂಗಳೂರಿಗೆ ವಾಪಸ್ ಬರುವಾಗ ಶಿರಾಡಿ ಘಾಟ್ನ ರಾಜಘಟ್ಟ ಎಂಬಲ್ಲಿ ದುಪಟ್ಟಾದಿಂದ ಆಕೆಯ ಕುತ್ತಿಗೆ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಲಾಗಿತ್ತು. ಮೃತದೇಹವನ್ನು ಅರಣ್ಯ ಪ್ರದೇಶಕ್ಕೆ ಎಸೆದು ಸುಳಿವು ಸಿಗದಂತೆ ಮಾಡಲಾಗಿತ್ತು. ಬೆಂಗಳೂರಿಗೆ ವಾಪಸ್ ಬಂದು ಪತ್ನಿ ಕಾಣೆಯಾಗಿದ್ದಾರೆಂದು ಪೃಥ್ವಿರಾಜ್ ದೂರು ನೀಡಿದ್ದ.’