‘ರಾಜಶೇಖರ್ ಅವರ ಕಂಪನಿಯಲ್ಲಿ ಆರೋಪಿ ಮಧು ಕೆಲಸ ಮಾಡುತ್ತಿದ್ದರು. ಕೆಲ ದಿನಗಳ ಹಿಂದಷ್ಟೇ ಅವರನ್ನು ಕೆಲಸದಿಂದ ತೆಗೆಯಲಾಗಿತ್ತು. ಇದರಿಂದ ಸಿಟ್ಟಾಗಿದ್ದ ಮಧು, ರಾಜಶೇಖರ್ ಅವರನ್ನು ಕೊಲೆ ಮಾಡಲು ಸಂಚು ರೂಪಿಸಿದ್ದರು. ಇದಕ್ಕೆ ಆರೋಪಿಗಳಾದ ಪ್ರಮೋದ್, ಡಿ. ಅಲೆಕ್ಸಾಂಡರ್, ಟಿ. ಚಿನ್ನರಾಜು ಹಾಗೂ ಇಮ್ರಾನ್ ಪಾಷಾ ಎಂಬುವರ ಸಹಾಯ ಪಡೆದಿದ್ದರು. ಅವರೆಲ್ಲ ಸದ್ಯ ತಲೆಮರೆಸಿಕೊಂಡಿದ್ದಾರೆ’ ಎಂದೂ ಹೇಳಿದರು.