ಬಸ್ಸು ಹೊರಗೆ ಬಾರದೇ ಒಳಗೇ ಉಳಿದುದನ್ನು ಅರಿತ ನಗರಾಭಿವೃದ್ಧಿ ಯುವ ಹೋರಾಟ ಸಮಿತಿ ಸಂಚಾಲಕ ಬಸಯ್ಯ ನಂದಿಕೇಶ್ವರಮಠ, ಸದಸ್ಯರಾದ ಉಮೇಶ ಜತ್ತಿ, ಪುರಸಭೆ ಮಾಜಿ ಸದಸ್ಯ ಪುಟ್ಟು ಕುಲಕರ್ಣಿ, ಅಶೋಕ ಚಿನಿವಾರ, ರಾಜು ಕಂಠಿ, ಗಿರೀಶ ದೇಶಪಾಂಡೆ ಹಾಗೂ ನಮ್ಮ ಕರ್ನಾಟಕ ರಕ್ಷಣಾ ವೇದಿಕೆಯ ಸದಸ್ಯರಾದ ವಿಕಾರ ಅಹ್ಮದ ಮೋಮಿನ್, ಆಸೀಫ್ ಇಕ್ಬಾಲ್ ಮೋಮಿನ್ ಹಸನ್ ಬಾಗವಾನ ಮತ್ತಿತರರು ಬಸ್ಸನ್ನು ಹೊರಗೆ ತಂದು ಪಟ್ಟಣದ ತುಂಬ ಮೆರವಣಿಗೆ ಮಾಡಿ ಗ್ರಾಮದೇವತೆ ದೇವಸ್ಥಾನದ ಮುಂದೆ ಬಸ್ಸಿನ ಪೂಜೆ ಮಾಡಿದರು.