ಚೌಡಪ್ಪ ಕಾಲೊನಿ ನಿವಾಸಿ ವಸಂತ್ ಅಲಿಯಾಸ್ ವಸಂತಕುಮಾರ್ ಕೊಲೆಯಾದ ವ್ಯಕ್ತಿ. ಆಟೊ ಚಾಲನೆ ಜೊತೆಗೆ ಪೇಂಟರ್ ವೃತ್ತಿ ಮಾಡುತ್ತಿದ್ದ ವಸಂತ್ ಮತ್ತು ನೆರೆಮನೆ ನಿವಾಸಿ ಕಮಲ್ ಸ್ನೇಹಿತರು. ರಾತ್ರಿ ಇಬ್ಬರೂ ಮದ್ಯ ಸೇವಿಸಿದ್ದು, ಹೊಸಹಳ್ಳಿ ಮುಖ್ಯರಸ್ತೆಯಲ್ಲಿ ಪಾದರಾಯನಪುರ ಚೌಡಪ್ಪ ಕಾಂಪೌಂಡ್ ಬಳಿ ಭಾನುವಾರ ರಾತ್ರಿ 12.30ರ ಸುಮಾರಿಗೆ ಕ್ಷುಲ್ಲಕ ಕಾರಣಕ್ಕೆ ಜಗಳವಾಡಿಕೊಂಡಿದ್ದಾರೆ.