ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಜಿ ಪ್ರಿಯಕರನ ಕೊಂದ ತೃತೀಯ ಲಿಂಗಿ?

Last Updated 27 ಅಕ್ಟೋಬರ್ 2019, 11:37 IST
ಅಕ್ಷರ ಗಾತ್ರ

ಬೆಂಗಳೂರು: ಹೆಗ್ಗನಹಳ್ಳಿಯ ಮೋಹನ್ ಚಿತ್ರಮಂದಿರದ ಬಳಿ ಅ. 24ರಂದು ಸಂಜೆ 7.30ರ ಸುಮಾರಿಗೆ ನಡೆದ ಸುಂಕದಕಟ್ಟೆ ನಿವಾಸಿ ಮನೋಜ್ (21) ಎಂಬಾತನ ಕೊಲೆ ಪ್ರಕರಣವನ್ನು ಭೇದಿಸಿರುವ ಪೊಲೀಸರು, ತೃತೀಯ ಲಿಂಗಿ ಮತ್ತು ಆಕೆಯ ಪ್ರಿಯಕರನ್ನು ಬಂಧಿಸಿದ್ದಾರೆ.

ಈ ಹಿಂದೆ ಮನೋಜ್‌ನನ್ನು ಪ್ರೀತಿಸುತ್ತಿದ್ದ ತೃತೀಯ ಲಿಂಗಿ ರೋಝಿ ಮತ್ತು ಆಕೆಯ ಹೊಸ ಪ್ರಿಯತಮ ಶಿವು ಬಂಧಿತರು ಎಂದು ಗೊತ್ತಾಗಿದೆ.

ಮನೋಜ್‌ ಮತ್ತು ರೋಝಿ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ಒಂದು ತಿಂಗಳ ಹಿಂದೆ ಊರಿಗೆ ಹೋಗಿದ್ದ ಮನೋಜ್ ಮರಳಿ ಬಂದಿ
ರಲಿಲ್ಲ. ರೋಝಿಯ ಸಂಪರ್ಕಕ್ಕೂ ಸಿಕ್ಕಿರಲಿಲ್ಲ. ಹೀಗಾಗಿ ಮನೋಜ್ ವಾಪಸ್ ಬರಲಿಲ್ಲ ಎಂದು ಶಿವು ಎಂಬಾತನನ್ನು ಪ್ರೀತಿಸಲು ರೋಝಿ ಆರಂಭಿಸಿದ್ದಳು ಎನ್ನಲಾಗಿದೆ. ಒಂದು ತಿಂಗಳ ಬಳಿಕ ವಾಪಸು ಬಂದ ಮನೋಜ್, ತನ್ನ ಪ್ರೇಯಸಿ ಬೇರೆ ಹುಡುಗನ ಜೊತೆ ಪ್ರೀತಿಯಲ್ಲಿ ಬಿದ್ದಿರುವ ವಿಷಯ ತಿಳಿದು ಕೋಪಗೊಂಡಿದ್ದಾನೆ. ಈ ನಡುವೆ ರೋಝಿ ಹೊಸ ಪ್ರಿಯತಮನ ಹೆಸರನ್ನು ಕೈ ಮೇಲೆ ಟ್ಯಾಟು ಹಾಕಿಸಿಕೊಂಡಿದ್ದನ್ನು ನೋಡಿದ ಮನೋಜ್, ಅವನನ್ನು ಬಿಟ್ಟು ಬಿಡು ಎಂದು ಜೋರು ಮಾಡಿದ್ದಾನೆ ಎನ್ನಲಾಗಿದೆ.

ಇದರಿಂದ ಕೋಪಗೊಂಡ ರೋಝಿ, ‘ಮಾತನಾಡಬೇಕು ಬಾ’ ಎಂದು ಮನೋಜ್‍ನನ್ನು ಕರೆಸಿಕೊಂಡು ಮದ್ಯ ಕುಡಿಸಿ, ಬಳಿಕ ಹೊಸ ಪ್ರಿಯಕರ ಹಾಗೂ ಆತನ ಸಹಚರರ ಜೊತೆಗೂಡಿ ಕೊಲೆ ಮಾಡಿಸಿದ್ದಾಳೆ ಎಂದೂ ಹೇಳಲಾಗಿದೆ. ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT