ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ಕನಿಗೆ ಕಿರುಕುಳ ಕೊಟ್ಟಿದ್ದಕ್ಕೆ ರೌಡಿ ಹತ್ಯೆ

ತಾಯಿ–ಮಗ ಸೇರಿ ಆರು ಮಂದಿ ಬಂಧನ
Last Updated 15 ಫೆಬ್ರುವರಿ 2020, 21:59 IST
ಅಕ್ಷರ ಗಾತ್ರ

ಬೆಂಗಳೂರು: ತನ್ನ ಅಕ್ಕನಿಗೆ ಲೈಂಗಿಕ ಕಿರುಕುಳ ನೀಡಿ ತಾಯಿಯನ್ನು ಹಣಕ್ಕಾಗಿ ಪೀಡಿಸುತ್ತಿದ್ದ ಎಂಬ ಕಾರಣಕ್ಕೆ ಯುವಕನೊಬ್ಬ ಸಹಚರರ ಜೊತೆ ಸೇರಿ ರೌಡಿ ಪ್ರಭಾಕರ್‌ (28) ಎಂಬಾತನನ್ನು ಹತ್ಯೆ ಮಾಡಿದ್ದಾನೆ.

‘ಫೆ. 11ರಂದು ರಾತ್ರಿ 7.40ರ ವೇಳೆ ನಡೆದಿದ್ದ ಪ್ರಭಾಕರ್ ಕೊಲೆ ಸಂಬಂಧ ದೀಪಕ್‌ ಹಾಗೂ ಆತನ ತಾಯಿ ಮಾಲಾ, ಸಹಚರರಾದ ಶಿವ, ಅಜೇಯ್, ವಿನೋದ್, ಸುನೀಲ್ ಎಂಬುವರನ್ನು ಬಂಧಿಸಲಾಗಿದೆ. ಕೃತ್ಯಕ್ಕೆ ಬಳಸಿದ್ದ ಲಾಂಗ್ ಹಾಗೂ ಮಚ್ಚು ಜಪ್ತಿ ಮಾಡಲಾಗಿದೆ’ ಎಂದು ಕಾಟನ್‌ಪೇಟೆ ಪೊಲೀಸರು ಹೇಳಿದರು.

‘ಭಕ್ಷಿ ಗಾರ್ಡನ್ ನಿವಾಸಿ ದೀಪಕ್ (22), ಅಕ್ಕ ಹಾಗೂ ತಾಯಿ ಜೊತೆ ವಾಸವಿದ್ದ. ಕೊಲೆಗೆ ಯತ್ನ ಪ್ರಕರಣದಲ್ಲಿ ಜೈಲಿಗೆ ಹೋಗಿ ಜಾಮೀನು ಮೇಲೆ ಹೊರಬಂದಿದ್ದ ರೌಡಿ ಪ್ರಭಾಕರ್, ದೀಪಕ್‌ನ ಅಕ್ಕನಿಗೆ ಕಿರುಕುಳ ನೀಡಲಾರಂಭಿಸಿದ್ದ. ತಾನೊಬ್ಬ ರೌಡಿ ಎಂದು ಹೇಳಿಕೊಂಡು ಓಡಾಡುತ್ತಿದ್ದ’

‘ದೀಪಕ್‌ನ ತಾಯಿ ಹೊಸ ಮನೆ ಕಟ್ಟಿಸುತ್ತಿದ್ದರು. ಮನೆ ಪೂರ್ಣಗೊಳಿಸಬೇಕಾದರೆ ತನಗೆ ₹40 ಸಾವಿರ ಕೊಡಬೇಕೆಂದು ಪ್ರಭಾಕರ್ ಪೀಡಿಸಲಾರಂಭಿಸಿದ್ದ. ಹಣ ಕೊಡದಿದ್ದರೆ ಎಲ್ಲರನ್ನೂ ಕೊಲೆ ಮಾಡುವುದಾಗಿ ಬೆದರಿಸಿದ್ದ. ಅದು ಗೊತ್ತಾಗುತ್ತಿದ್ದಂತೆ ಸಹಚರರ ಮೂಲಕ ದೀಪಕ್, ಪ್ರಭಾಕರ್‌ನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದ. ಈ ಸಂಬಂಧ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ’ ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT