ಆರು ತಿಂಗಳ ಹಿಂದೆಅಸ್ಸಾಂನಿಂದ ಬಂದಿದ್ದ ಮಿಸ್ಬಾ, ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ. ಆರೋಪಿ ಆರೀಫುದ್ದಿನ್ ಕೂಡ ಅದೇ ಕೆಲಸದಲ್ಲಿದ್ದ. ಇತ್ತೀಚೆಗೆ ನೀರಿನ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆಯಾಗಿತ್ತು.
ಇದರಿಂದ ಕೋಪಗೊಂಡಿದ್ದ ಆರೀಫುದ್ದಿನ್, ಮಿಸ್ಬಾನನ್ನು ಮನೆಗೆ ಕರೆಸಿಕೊಂಡು, ಉಸಿರುಗಟ್ಟಿ ಕೊಲೆ ಮಾಡಿದ್ದ. ಯಾರಿಗೂ ಅನುಮಾನ ಬರದಂತೆ ನೀರಿನ ಸಂಪ್ನಲ್ಲಿ ಶವ ಬಿಸಾಡಿದ್ದ. ಮಿಸ್ಬಾನ ಮೊಬೈಲ್ ಸ್ವಿಚ್ ಆಫ್ ಮಾಡಿ, ಅಸ್ಸಾಂಗೆ ಪರಾರಿಯಾಗಿದ್ದ.
ಮಿಸ್ಬಾ ಕಾಣೆಯಾಗಿದ್ದಾನೆ ಎಂದು ಸಹೋದರ ಕಬ್ಬನ್ ಪಾರ್ಕ್ ಠಾಣೆಗೆ ದೂರು ನೀಡಿದ್ದರು. ಮೊಬೈಲ್ನಿಂದ ಆರೋಪಿಯ ಸುಳಿವು ಸಿಕ್ಕಿದ್ದು, ಅಸ್ಸಾಂನಲ್ಲಿ ತಲೆಮರೆಸಿಕೊಂಡಿರುವ ಮಾಹಿತಿ ಪೊಲೀಸರಿಗೆ ಲಭ್ಯವಾಗಿತ್ತು. ಅಸ್ಸಾಂ ಪೊಲೀಸರ ಸಹಾಯದಿಂದ ಆರೋಪಿಯನ್ನು ಬಂಧಿಸಿದ್ಧಾರೆ.