ಬೆಂಗಳೂರು: ನಗರದ ಡಿ.ಜೆ. ಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ಸುಭಾನ್ (30) ಎಂಬುವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ.
ಸ್ಥಳೀಯ ನಿವಾಸಿಯಾದ ಸುಭಾನ್ ಅವರ ಮೃತದೇಹ ಶ್ಯಾಂಪುರ ರೈಲ್ವೆ ಗೇಟ್ ಬಳಿ ಶನಿವಾರ ಪತ್ತೆಯಾಗಿದೆ.
‘ಮೃತ ಸುಭಾನ್ ಹಾಗೂ ಸೈಯದ್ ತಬ್ರೇಜ್ ನಡುವೆ ವೈಷಮ್ಯವಿತ್ತು. ಅವರಿಬ್ಬರ ನಡುವೆ ಹಲವು ಬಾರಿ ಗಲಾಟೆಯೂ ನಡೆದಿತ್ತು. ಈಗ ನಡೆದಿರುವ ಕೊಲೆಗೂ ತಬ್ರೇಜ್ಗೂ ಸಂಬಂಧವಿರುವ ಮಾಹಿತಿ ಇದೆ. ಸದ್ಯ ಅವರು ತಲೆಮರೆಸಿಕೊಂಡಿದ್ದಾರೆ’ ಎಂದು ಪೊಲೀಸರು ಹೇಳಿದರು.
‘ಸುಭಾನ್ ಅವರ ಮುಖಕ್ಕೆ ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಿರುವ ದುಷ್ಕರ್ಮಿಗಳು, ಮೃತದೇಹವನ್ನು ರೈಲ್ವೆ ಗೇಟ್ ಬಳಿ ಎಸೆದು ಹೋಗಿದ್ದಾರೆ’ ಎಂದೂ ಮಾಹಿತಿ ನೀಡಿದರು.