ಬೆಂಗಳೂರು: ವಿಮಾನ ನಿಲ್ದಾಣ ಸಮೀಪ ಇತ್ತೀಚೆಗೆ ನಡೆದಿದ್ದ ಯುವತಿಯೊಬ್ಬರ ಕೊಲೆ ಪ್ರಕರಣ ಭೇದಿಸಿರುವ ಬಾಗಲೂರು ಪೊಲೀಸರು, ಓಲಾ ಕ್ಯಾಬ್ ಚಾಲಕ ಎಚ್.ಎಂ.ನಾಗೇಶ್ ಎಂಬುವರನ್ನು ಬಂಧಿಸಿದ್ದಾರೆ.
ಹೆಗ್ಗನಹಳ್ಳಿ ಕ್ರಾಸಿನ ಸಂಜೀವಿನಿ ನಗರದ ನಿವಾಸಿಯಾ ಆತ, ಕೊಲ್ಕತ್ತಾದ ಪೂಜಾ ಸಿಂಗ್ ದೇ ಎಂಬುವರನ್ನು ಕೊಲೆ ಮಾಡಿದ್ದ.
ವಿಮಾನ ನಿಲ್ದಾಣಕ್ಕೆ ಹೊರಟಿದ್ದ ಯುವತಿ, ಕ್ಯಾಬ್ ಬುಕ್ ಮಾಡಿದ್ದರು. ಅದೇ ಕ್ಯಾಬಿನ ಚಾಲಕ, ಯುವತಿಯನ್ನು ಕೊಂದು ಆಕೆ ಬಳಿಯ ಹಣ ತೆಗೆದುಕೊಂಡು ಹೋಗಿದ್ದ ಎಂದು ಪೊಲೀಸರು ತಿಳಿಸಿದರು.