‘ಜ. 2ರಂದು ಅಫ್ರೋಜ್ ಅವರನ್ನು ಕರೆದುಕೊಂಡು ರೈಲ್ವೆ ಹಳಿ ಬಳಿ ಹೋಗಿದ್ದ ಆರೋಪಿಗಳು, ಚಾಕುವಿನಿಂದ ಇರಿದು ಕೊಂದು ಪರಾರಿಯಾಗಿದ್ದರು. ರುಂಡ ಹಾಗೂ ಮುಂಡ ಬೇರೆಯಾಗಿದ್ದ ಮೃತದೇಹ, ನಗರ ನಿಲ್ದಾಣ ಹಾಗೂ ನಾಯಂಡಹಳ್ಳಿ ನಿಲ್ದಾಣಗಳ ನಡುವಿನ ಹಳಿ ಮೇಲೆ ಸಿಕ್ಕಿತ್ತು. ಅದರ ಪಕ್ಕದಲ್ಲೇ ಮೊಬೈಲ್ ಸಹ ದೊರಕಿತ್ತು. ಕರೆ ವಿವರ ಸಂಗ್ರಹಿಸಿ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡರು’ ಎಂದೂ ಪೊಲೀಸ್ ಮೂಲಗಳು ಹೇಳಿವೆ.