ಹಲವು ಗಡುವು:
ಕೆಂಗೇರಿ ಮಾರ್ಗವು ಈಗಾಗಲೇ ಹಲವು ಗಡುವುಗಳನ್ನು ಮೀರಿದೆ. ವಾಸ್ತವವಾಗಿ 2018ರ ಡಿಸೆಂಬರ್ನಲ್ಲೇ ಇದು ಲೋಕಾರ್ಪಣೆ ಆಗಬೇಕಿತ್ತು. ಆದರೆ, ಕಾರಣಾಂತರಗಳಿಂದ 2019ರ ಮಾರ್ಚ್ಗೆ ಮುಂದೂಡಲ್ಪಟ್ಟಿತ್ತು. ಅಲ್ಲಿಂದ 2019ರ ನವೆಂಬರ್, 2020ರ ಅಕ್ಟೋಬರ್, 2021ರ ಫೆಬ್ರುವರಿ, ಏಪ್ರಿಲ್, ಜೂನ್ಗೆ ಸೇವೆಗೆ ಮುಕ್ತಗೊಳಿಸುವ ಗುರಿ ಇತ್ತು. ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಈ ಮಾರ್ಗ ಪರಿಶೀಲನೆ ನಡೆಸಿದ್ದರು. 2021ರ ಜುಲೈನಲ್ಲಿ ಈ ಮಾರ್ಗವನ್ನು ಲೋಕಾರ್ಪಣೆ ಮಾಡಲಾಗುತ್ತದೆ ಎಂದು ಬಿಎಂಆರ್ಸಿಎಲ್ ಆ ಸಂದರ್ಭದಲ್ಲಿ ಹೇಳಿತ್ತು. ಇದಾಗಿ ಒಂದು ತಿಂಗಳ ನಂತರ ‘ಮುಹೂರ್ತ’ ಕೂಡಿ ಬಂದಿದೆ.