ವಲಯವಾರು ಸಾಲ ನಿಗದಿಪಡಿಸಿದ ಬಗ್ಗೆ ವಿವರ ನೀಡಿದ ನಬಾರ್ಡ್ ಮುಖ್ಯ ಮಹಾಪ್ರಬಂಧಕ ಟಿ. ರಮೇಶ್, ರೈತರ ಆದಾಯ ವೃದ್ಧಿಸುವ ಯೋಜನೆಗಳನ್ನು ಗಮನದಲ್ಲಿರಿಸಿಕೊಂಡು ಸಾಲ ವಿತರಿಸುವ ಗುರಿಯನ್ನು ಹೆಚ್ಚಿಸಲಾಗಿದೆ. 2021-22 ರ ಅವಧಿಯಲ್ಲಿ ಕೋವಿಡ್ ಕಾರಣಕ್ಕೆ ಸಾಲ ವಿತರಿಸುವ ಪ್ರಮಾಣ ಕಡಿಮೆಯಾಗಿತ್ತು. ಈ ಬಾರಿ ಎಲ್ಲ ಬ್ಯಾಂಕ್ಗಳು ಸಾಲವನ್ನು ಆದ್ಯತೆಯ ವಲಯಕ್ಕೆ ವರ್ಗಾಯಿಸಬೇಕು’ ಎಂದು ಹೇಳಿದರು.