ಬೆಂಗಳೂರು: ಕಳೆದ ಮೂರು ದಿನಗಳ ಹಿಂದೆ ಆರ್.ಟಿ. ನಗರ ವ್ಯಾಪ್ತಿಯಲ್ಲಿ ಸುರಿದ ವ್ಯಾಪಕ ಮಳೆಗೆ ಮರಗಳು ಉರುಳಿ ಬಿದಿದ್ದು ಅವುಗಳನ್ನು ತೆರವುಗೊಳಿಸಿದ ಪೊಲೀಸ್ ಸಬ್ಇನ್ಸ್ಪೆಕ್ಟರ್ ನಾಗಭೂಷಣ್ಅವರನ್ನು ಸಂಚಾರ ಪೊಲೀಸ್ ವಿಭಾಗ ಪ್ರಶಂಸೆ ವ್ಯಕ್ತಪಡಿಸಿದೆ.
ಮೇ 26 ರಾತ್ರಿ ಸುರಿದ ಮಳೆಗೆ ಆರ್.ಟಿ.ನಗರ ಸಂಚಾರ ಠಾಣೆ ವ್ಯಾಪ್ತಿಯ ಜೆ.ಸಿ ರಸ್ತೆಯಲ್ಲಿ ಹಲವುಮರಗಳು ಉರುಳಿ ಬಿದಿದ್ದವು.ನಾಗಭೂಷಣ್ ಮತ್ತು ಅವರ ತಂಡ ರಾತ್ರಿಯಿಡೀ ಕಾರ್ಯಾಚರಣೆ ನಡೆಸಿ ಮರಗಳನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿತ್ತು.
ಉತ್ತರ ವಿಭಾಗದ ಸಂಚಾರ ಪೊಲೀಸ್ಉಪ ಆಯುಕ್ತರಾದ ಸರಾಫಾತಿಮಾ ಅವರು ನಾಗಭೂಷಣ್ ಅವರಿಗೆ ಪ್ರಶಂಸೆಯ ಪತ್ರವನ್ನು ನೀಡಿದ್ದಾರೆ.