<p>ಬೆಂಗಳೂರಿನ ಕಸದ ಸಮಸ್ಯೆ ಸದಾ ಸುದ್ದಿಯಲ್ಲಿರುತ್ತದೆ. ಪ್ರತಿ ವರ್ಷ ನೂರಾರು ಕೋಟಿ ಖರ್ಚು, ಯೋಜನೆಗಳ ಹೊರತಾಗಿಯೂ ಸಮಸ್ಯೆ ಮಾತ್ರ ಎದ್ದು ಕಾಣುತ್ತದೆ. ಸಾರ್ವಜನಿಕರಂತೂ ಹೈರಾಣಾಗಿದ್ದಾರೆ. ಈ ನಡುವೆ ನಗರದ ಕಸದ ಸಮಸ್ಯೆ ಕುರಿತಂತೆ ವರದಿ ಮಾಡಲು ಬೆಂಗಳೂರು ಮೂಲದ ಪ್ರಾಡಕ್ಟ್ ಡಿಸೈನರ್ ಜ್ಯೋತಿಶ್ ಎಂಬುವವರು '<strong><a href="https://www.nammakasa.in/">NammaKasa</a></strong>’ ಎಂಬ ಆನ್ ಲೈನ್ ವೇದಿಕೆಯನ್ನು ಆರಂಭಿಸಿದ್ದಾರೆ. </p><p>ಇದರ ಮೂಲಕ ಬೆಂಗಳೂರಿನ ಜನರು ತಮ್ಮ ಪ್ರದೇಶದ ಕಸದ ಸಮಸ್ಯೆಯನ್ನು ಚಿತ್ರದ ಮೂಲಕ ಲೈವ್ ಮ್ಯಾಪ್ನಲ್ಲಿ 30 ಸೆಕೆಂಡುಗಳಲ್ಲಿ ಅಪ್ಡೇಟ್ ಮಾಡಬಹುದು. ಓಪನ್ ಸೋರ್ಸ್ ಟೂಲ್ ಬಳಸಿ ಈ ಜಾಲತಾಣವನ್ನು ರಚಿಸಲಾಗಿದ್ದು, ಯಾವುದೇ ಲಾಗಿನ್ ಅಗತ್ಯವಿರುವುದಿಲ್ಲ ಎಂದು ವರದಿ ತಿಳಿಸಿದೆ.</p><p>ಏಪ್ರಿಲ್ 8ರಂದೇ ಈ ಜಾಲತಾಣ ಶುರುವಾಗಿದ್ದು, 270ಕ್ಕೂ ಅಧಿಕ ದೂರು ವರದಿಯಾಗಿವೆ. ಅದರಲ್ಲಿ ಕೆಲವಕ್ಕೆ ಪರಿಹಾರ ಸಿಕ್ಕಿದೆ. 45,000ಕ್ಕೂ ಅಧಿಕ ಬಳಕೆದಾರರು ಭೇಟಿ ಕೊಟ್ಟಿದ್ದಾರೆ ಎಂದು ವರದಿ ತಿಳಿಸಿದೆ.</p><p>ಬೆಂಗಳೂರು ನಗರದಲ್ಲಿನ ನಾಗರಿಕ ಸಮಸ್ಯೆಗಳು ಮತ್ತು ಕಸದ ಸಮಸ್ಯೆ ಬಗ್ಗೆ ನಾನೂ ಆಗಾಗ್ಗೆ ಮಾತನಾಡುತ್ತಿದ್ದೆ. ನಂತರ ಕೇವಲ ಹತಾಶೆಯನ್ನು ವ್ಯಕ್ತಪಡಿಸುವ ಬದಲು ಏನಾದರೂ ಮಾಡೋಣ ಎಂದು ಅರಿತುಕೊಂಡೆ. ದೈನಂದಿನ ನಾಗರಿಕ ಸಮಸ್ಯೆಗಳ ಪ್ರತಿಕ್ರಿಯೆಯಾಗಿ ಪ್ರಾರಂಭವಾದ ಈ ಜಾಲತಾಣ, ಕ್ರಮೇಣ ನಗರದಲ್ಲಿನ ಕಸದ ಸಮಸ್ಯೆಯನ್ನು ಪರಿಹರಿಸುವತ್ತ ಗಮನಹರಿಸುತ್ತಿದೆ ಎಂದು ಜ್ಯೋತಿಶ್ ವಿವರಿಸಿದ್ದಾರೆ.</p><p>ಸಾರ್ವಜನಿಕರಿಂದ ಇಷ್ಟು ದೊಡ್ಡ ಪ್ರಮಾಣದ ಪ್ರತಿಕ್ರಿಯೆಯನ್ನು ನಾನು ನಿರೀಕ್ಷಿಸಿರಲಿಲ್ಲ. ಜನರು ನಗರದ ಬಗ್ಗೆ ಹೊಂದಿರುವ ನೈಜ ಕಾಳಜಿಯನ್ನು ಇದು ತೋರಿಸುತ್ತದೆ ಎಂದು ಅವರು ಹೇಳಿದ್ದಾರೆ.</p><p>ಈ ವೇದಿಕೆಯ ಪ್ರಮುಖ ಕೆಲಸವೆಂದರೆ ಹೊಣೆಗಾರಿಕೆಯ ಮೇಲಿನ ಗಮನ. ವರದಿಯಾದ ಸಮಸ್ಯೆಗಳನ್ನು ಲೈವ್ ನಕ್ಷೆ ಮೂಲಕ ಸಾರ್ವಜನಿಕವಾಗಿ ಪ್ರದರ್ಶಿಸಲಾಗುತ್ತದೆ. ಸಂಸದರು ಮತ್ತು ಶಾಸಕರು ಸೇರಿದಂತೆ ಚುನಾಯಿತ ಪ್ರತಿನಿಧಿಗಳಿಗೆ ಲಿಂಕ್ ಮಾಡಲಾಗುತ್ತದೆ. ಸಮಸ್ಯೆಗಳು ಬಹಿರಂಗವಾಗಿ ಗೋಚರಿಸಿದಾಗ, ಕ್ರಮಕ್ಕಾಗಿ ಒತ್ತಾಯಿಸುವುದು ಸುಲಭವಾಗುತ್ತದೆ ಎಂದು ಜ್ಯೋತಿಶ್ ಹೇಳಿದ್ದಾರೆ.</p><p>ಭವಿಷ್ಯದಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಮತ್ತು ತ್ಯಾಜ್ಯ ನಿರ್ವಹಣಾ ತಂಡಗಳಂತಹ ಸ್ಥಳೀಯ ಅಧಿಕಾರಿಗಳನ್ನು ಸಂಯೋಜಿಸುವ ಯೋಜನೆಗಳಿವೆ ಎಂದು ತಿಳಿಸಿದ್ದಾರೆ.</p><p>ಸಮಸ್ಯೆಗೆ ಸೂಕ್ತ ಪ್ರತಿಕ್ರಿಯೆ ಕಾರ್ಯವಿಧಾನಗಳನ್ನು ಸುಧಾರಿಸಲು ಡ್ಯಾಶ್ಬೋರ್ಡ್ ಅಭಿವೃದ್ಧಿಪಡಿಸುವ ಮತ್ತು ಅಧಿಕಾರಿಗಳೊಂದಿಗೆ ದತ್ತಾಂಶದ ಒಳನೋಟವನ್ನು ಹಂಚಿಕೊಳ್ಳುವ ಕೆಲಸ ನಡೆಯುತ್ತಿದೆ. ಸರ್ಕಾರವು ಸಮಸ್ಯೆಗಳನ್ನು ಉತ್ತಮವಾಗಿ ಗುರುತಿಸಲು ಮತ್ತು ಅರ್ಥಮಾಡಿಕೊಳ್ಳಲು ಒಂದು ಮಾಧ್ಯಮವಾಗಿ ಈ ವೇದಿಕೆ ಕಾರ್ಯನಿರ್ವಹಿಸುತ್ತದೆ ಎಂದು ಅವರು ಹೇಳಿದ್ದಾರೆ.</p><p>ವೇದಿಕೆಯು ಪ್ರಸ್ತುತ ಮುಖ್ಯವಾಗಿ ಕಸ ಸಂಬಂಧಿತ ಸಮಸ್ಯೆಗಳ ಮೇಲೆ ಕೇಂದ್ರೀಕರಿಸಿದೆ. ಭವಿಷ್ಯದಲ್ಲಿ ಇತರ ನಾಗರಿಕ ಸಮಸ್ಯೆಗಳತ್ತ ಗಮನ ಹರಿಸುವ ಚಿಂತನೆ ಇದೆ. ವಾಣಿಜ್ಯೇತರವಾಗಿ ಉಳಿದಿದ್ದು, ನಾಗರಿಕರ ಭಾಗವಹಿಸುವಿಕೆಯನ್ನು ಉತ್ತೇಜಿಸುವತ್ತ ಗಮನಹರಿಸುವುದನ್ನು ಮುಂದುವರಿಸುತ್ತದೆ ಎಂದು ಜ್ಯೋತಿಶ್ ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಂಗಳೂರಿನ ಕಸದ ಸಮಸ್ಯೆ ಸದಾ ಸುದ್ದಿಯಲ್ಲಿರುತ್ತದೆ. ಪ್ರತಿ ವರ್ಷ ನೂರಾರು ಕೋಟಿ ಖರ್ಚು, ಯೋಜನೆಗಳ ಹೊರತಾಗಿಯೂ ಸಮಸ್ಯೆ ಮಾತ್ರ ಎದ್ದು ಕಾಣುತ್ತದೆ. ಸಾರ್ವಜನಿಕರಂತೂ ಹೈರಾಣಾಗಿದ್ದಾರೆ. ಈ ನಡುವೆ ನಗರದ ಕಸದ ಸಮಸ್ಯೆ ಕುರಿತಂತೆ ವರದಿ ಮಾಡಲು ಬೆಂಗಳೂರು ಮೂಲದ ಪ್ರಾಡಕ್ಟ್ ಡಿಸೈನರ್ ಜ್ಯೋತಿಶ್ ಎಂಬುವವರು '<strong><a href="https://www.nammakasa.in/">NammaKasa</a></strong>’ ಎಂಬ ಆನ್ ಲೈನ್ ವೇದಿಕೆಯನ್ನು ಆರಂಭಿಸಿದ್ದಾರೆ. </p><p>ಇದರ ಮೂಲಕ ಬೆಂಗಳೂರಿನ ಜನರು ತಮ್ಮ ಪ್ರದೇಶದ ಕಸದ ಸಮಸ್ಯೆಯನ್ನು ಚಿತ್ರದ ಮೂಲಕ ಲೈವ್ ಮ್ಯಾಪ್ನಲ್ಲಿ 30 ಸೆಕೆಂಡುಗಳಲ್ಲಿ ಅಪ್ಡೇಟ್ ಮಾಡಬಹುದು. ಓಪನ್ ಸೋರ್ಸ್ ಟೂಲ್ ಬಳಸಿ ಈ ಜಾಲತಾಣವನ್ನು ರಚಿಸಲಾಗಿದ್ದು, ಯಾವುದೇ ಲಾಗಿನ್ ಅಗತ್ಯವಿರುವುದಿಲ್ಲ ಎಂದು ವರದಿ ತಿಳಿಸಿದೆ.</p><p>ಏಪ್ರಿಲ್ 8ರಂದೇ ಈ ಜಾಲತಾಣ ಶುರುವಾಗಿದ್ದು, 270ಕ್ಕೂ ಅಧಿಕ ದೂರು ವರದಿಯಾಗಿವೆ. ಅದರಲ್ಲಿ ಕೆಲವಕ್ಕೆ ಪರಿಹಾರ ಸಿಕ್ಕಿದೆ. 45,000ಕ್ಕೂ ಅಧಿಕ ಬಳಕೆದಾರರು ಭೇಟಿ ಕೊಟ್ಟಿದ್ದಾರೆ ಎಂದು ವರದಿ ತಿಳಿಸಿದೆ.</p><p>ಬೆಂಗಳೂರು ನಗರದಲ್ಲಿನ ನಾಗರಿಕ ಸಮಸ್ಯೆಗಳು ಮತ್ತು ಕಸದ ಸಮಸ್ಯೆ ಬಗ್ಗೆ ನಾನೂ ಆಗಾಗ್ಗೆ ಮಾತನಾಡುತ್ತಿದ್ದೆ. ನಂತರ ಕೇವಲ ಹತಾಶೆಯನ್ನು ವ್ಯಕ್ತಪಡಿಸುವ ಬದಲು ಏನಾದರೂ ಮಾಡೋಣ ಎಂದು ಅರಿತುಕೊಂಡೆ. ದೈನಂದಿನ ನಾಗರಿಕ ಸಮಸ್ಯೆಗಳ ಪ್ರತಿಕ್ರಿಯೆಯಾಗಿ ಪ್ರಾರಂಭವಾದ ಈ ಜಾಲತಾಣ, ಕ್ರಮೇಣ ನಗರದಲ್ಲಿನ ಕಸದ ಸಮಸ್ಯೆಯನ್ನು ಪರಿಹರಿಸುವತ್ತ ಗಮನಹರಿಸುತ್ತಿದೆ ಎಂದು ಜ್ಯೋತಿಶ್ ವಿವರಿಸಿದ್ದಾರೆ.</p><p>ಸಾರ್ವಜನಿಕರಿಂದ ಇಷ್ಟು ದೊಡ್ಡ ಪ್ರಮಾಣದ ಪ್ರತಿಕ್ರಿಯೆಯನ್ನು ನಾನು ನಿರೀಕ್ಷಿಸಿರಲಿಲ್ಲ. ಜನರು ನಗರದ ಬಗ್ಗೆ ಹೊಂದಿರುವ ನೈಜ ಕಾಳಜಿಯನ್ನು ಇದು ತೋರಿಸುತ್ತದೆ ಎಂದು ಅವರು ಹೇಳಿದ್ದಾರೆ.</p><p>ಈ ವೇದಿಕೆಯ ಪ್ರಮುಖ ಕೆಲಸವೆಂದರೆ ಹೊಣೆಗಾರಿಕೆಯ ಮೇಲಿನ ಗಮನ. ವರದಿಯಾದ ಸಮಸ್ಯೆಗಳನ್ನು ಲೈವ್ ನಕ್ಷೆ ಮೂಲಕ ಸಾರ್ವಜನಿಕವಾಗಿ ಪ್ರದರ್ಶಿಸಲಾಗುತ್ತದೆ. ಸಂಸದರು ಮತ್ತು ಶಾಸಕರು ಸೇರಿದಂತೆ ಚುನಾಯಿತ ಪ್ರತಿನಿಧಿಗಳಿಗೆ ಲಿಂಕ್ ಮಾಡಲಾಗುತ್ತದೆ. ಸಮಸ್ಯೆಗಳು ಬಹಿರಂಗವಾಗಿ ಗೋಚರಿಸಿದಾಗ, ಕ್ರಮಕ್ಕಾಗಿ ಒತ್ತಾಯಿಸುವುದು ಸುಲಭವಾಗುತ್ತದೆ ಎಂದು ಜ್ಯೋತಿಶ್ ಹೇಳಿದ್ದಾರೆ.</p><p>ಭವಿಷ್ಯದಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಮತ್ತು ತ್ಯಾಜ್ಯ ನಿರ್ವಹಣಾ ತಂಡಗಳಂತಹ ಸ್ಥಳೀಯ ಅಧಿಕಾರಿಗಳನ್ನು ಸಂಯೋಜಿಸುವ ಯೋಜನೆಗಳಿವೆ ಎಂದು ತಿಳಿಸಿದ್ದಾರೆ.</p><p>ಸಮಸ್ಯೆಗೆ ಸೂಕ್ತ ಪ್ರತಿಕ್ರಿಯೆ ಕಾರ್ಯವಿಧಾನಗಳನ್ನು ಸುಧಾರಿಸಲು ಡ್ಯಾಶ್ಬೋರ್ಡ್ ಅಭಿವೃದ್ಧಿಪಡಿಸುವ ಮತ್ತು ಅಧಿಕಾರಿಗಳೊಂದಿಗೆ ದತ್ತಾಂಶದ ಒಳನೋಟವನ್ನು ಹಂಚಿಕೊಳ್ಳುವ ಕೆಲಸ ನಡೆಯುತ್ತಿದೆ. ಸರ್ಕಾರವು ಸಮಸ್ಯೆಗಳನ್ನು ಉತ್ತಮವಾಗಿ ಗುರುತಿಸಲು ಮತ್ತು ಅರ್ಥಮಾಡಿಕೊಳ್ಳಲು ಒಂದು ಮಾಧ್ಯಮವಾಗಿ ಈ ವೇದಿಕೆ ಕಾರ್ಯನಿರ್ವಹಿಸುತ್ತದೆ ಎಂದು ಅವರು ಹೇಳಿದ್ದಾರೆ.</p><p>ವೇದಿಕೆಯು ಪ್ರಸ್ತುತ ಮುಖ್ಯವಾಗಿ ಕಸ ಸಂಬಂಧಿತ ಸಮಸ್ಯೆಗಳ ಮೇಲೆ ಕೇಂದ್ರೀಕರಿಸಿದೆ. ಭವಿಷ್ಯದಲ್ಲಿ ಇತರ ನಾಗರಿಕ ಸಮಸ್ಯೆಗಳತ್ತ ಗಮನ ಹರಿಸುವ ಚಿಂತನೆ ಇದೆ. ವಾಣಿಜ್ಯೇತರವಾಗಿ ಉಳಿದಿದ್ದು, ನಾಗರಿಕರ ಭಾಗವಹಿಸುವಿಕೆಯನ್ನು ಉತ್ತೇಜಿಸುವತ್ತ ಗಮನಹರಿಸುವುದನ್ನು ಮುಂದುವರಿಸುತ್ತದೆ ಎಂದು ಜ್ಯೋತಿಶ್ ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>