‘ನಮ್ಮ ಭಾರತವು ಇಂದು ಆದ್ಯತೆಗಳ ಪಲ್ಲಟವನ್ನು ಕಂಡಿದೆ. ಹಿಂದೆ ಸಮಾನತೆ ಬಗ್ಗೆ ಮಾತನಾಡುತ್ತಿದ್ದೆವು. ಈಗ ಸಹಿಷ್ಣುತೆ ಬಗ್ಗೆ ಮಾತನಾಡುತ್ತಿದ್ದೇವೆ. ದೊಡ್ಡ ನಾಗರಿಕತೆಯ ವಾರಸುದಾರರು ನಾವು. ಇಲ್ಲಿ ಬಡತನವೂ ಇದೆ, ಸಂಘರ್ಷವೂ ಇದೆ. ಸ್ವಾತಂತ್ರ್ಯ ಮತ್ತು ಸಮಾನತೆ ಇಲ್ಲದ ಪ್ರಜಾಪ್ರಭುತ್ವ ಇಲ್ಲ. ನಾವೆಲ್ಲರೂ ಜಾತಿ ಎಂಬ ಜೈಲು, ಧರ್ಮ ಎಂಬ ದ್ವೀಪಗಳಲ್ಲಿ ಬಂಧಿಯಾಗಿದ್ದೇವೆ. ಇದರಿಂದ ಕಳಚಿಕೊಳ್ಳಬೇಕು. ನಾಯಕ,ಖಳನಾಯಕರನ್ನು ಸೃಷ್ಟಿಸುವ ಚಾಳಿಯನ್ನು ಬಿಡಬೇಕಿದೆ. ನಮ್ಮ ದೇಶವೇ ನಿಜವಾದ ನಾಯಕ’ ಎಂದು ಹೇಳಿದರು.