ಸೇಠ್ ಆಗಷ್ಟೇ ಅಧಿಕಾರ ಸ್ವೀಕರಿಸಿದ ಸಂದರ್ಭದಲ್ಲಿ ವೆಲ್ಲಾರ ಜಂಕ್ಷನ್-ಟ್ಯಾನರಿ ರಸ್ತೆ (ಪ್ಯಾಕೇಜ್ 2 ಮತ್ತು 3)ವರೆಗೆ ಟೆಂಡರ್ ಆದೇಶಿಸಲಾಗಿತ್ತು. ಆದರೆ, ಅದರಲ್ಲಿ ಅಂದಾಜು ವೆಚ್ಚಕ್ಕಿಂತ ಶೇ. 80ರಷ್ಟು ಹೆಚ್ಚುವರಿ ಮೊತ್ತವನ್ನು ಗುತ್ತಿಗೆದಾರರು ನಮೂದಿಸಿದ್ದರು. ಅದನ್ನು ರದ್ದುಗೊಳಿಸಿ, ಕೆಲವು ಮಾರ್ಪಾಡುಗಳೊಂದಿಗೆ ಮರುಟೆಂಡರ್ಗೆ ಸೂಚಿಸಿದರು. ಪರಿಣಾಮ ಅಂದಾಜು ವೆಚ್ಚಕ್ಕಿಂತ ಕೇವಲ ಶೇ. 10-15ರಷ್ಟು ಹೆಚ್ಚು ಮೊತ್ತವನ್ನು ಗುತ್ತಿಗೆದಾರರು ನಮೂದಿಸಿದರು. ಇದರಿಂದ ನಿಗಮಕ್ಕೆ ಸಾವಿರಾರು ಕೋಟಿ ರೂಪಾಯಿ ಉಳಿತಾಯ ಆಯಿತು.