ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮ್ಮ ಮೆಟ್ರೊ ಕಾಮಗಾರಿ: ವಾಹನ ಸಂಚಾರ ಬದಲು

Last Updated 15 ಡಿಸೆಂಬರ್ 2022, 16:22 IST
ಅಕ್ಷರ ಗಾತ್ರ

ಬೆಂಗಳೂರು: ನಮ್ಮ ಮೆಟ್ರೊದ ಕಾಳೇನ ಅಗ್ರಹಾರ ನಿಲ್ದಾಣ ಕಾಮಗಾರಿ ನಡೆಯುತ್ತಿರುವುದರಿಂದ ಬನ್ನೇರುಘಟ್ಟ ಮುಖ್ಯರಸ್ತೆ ಸಂಪರ್ಕ ಕಲ್ಪಿಸುವ ಕೊತ್ತನೂರು ಅಡ್ಡರಸ್ತೆಯಲ್ಲಿ ವಾಹನ ಸಂಚಾರವನ್ನು ಡಿ.19ರಿಂದ ನಿಷೇಧಿಸಲಾಗಿದೆ.

ಕಾಮಗಾರಿ ನಡೆಯುತ್ತಿರುವುದರಿಂದ ಸುಗಮ ಸಂಚಾರಕ್ಕೆ ಅನುವಾಗಲು ಲೊಯೊಲಾ ಕಾಲೇಜು ಜಂಕ್ಷನ್‌ನಲ್ಲಿರುವ ಕೊತ್ತನೂರು ಅಡ್ಡರಸ್ತೆ ಸಂಚಾರ ನಿಷೇಧಿಸಲಾಗಿದೆ. ಪರ್ಯಾಯ ಮಾರ್ಗವನ್ನು ಸಂಚಾರ ಪೊಲೀಸರು ನಿಗದಿ ಮಾಡಿದ್ದಾರೆ ಎಂದು ‘ನಮ್ಮ ಮೆಟ್ರೊ’ದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಬಿ.ಎಸ್‌. ಯಶವಂತ್‌ ಚವ್ಹಾಣ್‌ ತಿಳಿಸಿದರು.

ಬನ್ನೇರುಘಟ್ಟದಿಂದ ಕೊತ್ತನೂರು ಕಡೆಗೆ ಸಂಚರಿಸುವವರು ಗೊಟ್ಟಿಗೆರೆಯಲ್ಲಿ ತಿರುವು ಪಡೆದು, ಜಂಬೂಸವಾರಿ ದಿನ್ನೆ ಮೂಲಕ ಬಿ.ಕೆ. ಸರ್ಕಲ್‌ ತಲು‍ಪಬಹುದು. ಜಯದೇವ ಜಂಕ್ಷನ್‌ನಿಂದ ಕೊತ್ತನೂರು ಕಡೆಗೆ ಸಂಚರಿಸುವವರು ಅರೆಕೆರೆ ಜಂಕ್ಷನ್‌ನಲ್ಲಿ ತಿರುವು ಪಡೆದು ಬ್ರಿಗೇಡ್‌ ಮಿಲೇನಿಯಂ ರಸ್ತೆ, ಆರ್‌ಬಿಐ ಲೇಔಟ್‌ ಮೂಲಕ ಬಿ.ಕೆ. ಸರ್ಕಲ್‌ ತಲುಪಬಹುದು. ಬನ್ನೇರುಘಟ್ಟ ಮುಖ್ಯರಸ್ತೆಯ ವಾಹನ ಸಂಚಾರದಲ್ಲಿ ಬದಲಾವಣೆ ಇರುವುದಿಲ್ಲ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT