ಬನ್ನೇರುಘಟ್ಟದಿಂದ ಕೊತ್ತನೂರು ಕಡೆಗೆ ಸಂಚರಿಸುವವರು ಗೊಟ್ಟಿಗೆರೆಯಲ್ಲಿ ತಿರುವು ಪಡೆದು, ಜಂಬೂಸವಾರಿ ದಿನ್ನೆ ಮೂಲಕ ಬಿ.ಕೆ. ಸರ್ಕಲ್ ತಲುಪಬಹುದು. ಜಯದೇವ ಜಂಕ್ಷನ್ನಿಂದ ಕೊತ್ತನೂರು ಕಡೆಗೆ ಸಂಚರಿಸುವವರು ಅರೆಕೆರೆ ಜಂಕ್ಷನ್ನಲ್ಲಿ ತಿರುವು ಪಡೆದು ಬ್ರಿಗೇಡ್ ಮಿಲೇನಿಯಂ ರಸ್ತೆ, ಆರ್ಬಿಐ ಲೇಔಟ್ ಮೂಲಕ ಬಿ.ಕೆ. ಸರ್ಕಲ್ ತಲುಪಬಹುದು. ಬನ್ನೇರುಘಟ್ಟ ಮುಖ್ಯರಸ್ತೆಯ ವಾಹನ ಸಂಚಾರದಲ್ಲಿ ಬದಲಾವಣೆ ಇರುವುದಿಲ್ಲ ಎಂದು ಹೇಳಿದರು.