ಉತ್ತೀರ್ಣರಾದ ನಂತರವೇ ಮಾತೃಭಾಷೆಯಲ್ಲಿ(ಕನ್ನಡ) ಪರೀಕ್ಷೆ ಬರೆಯಬಹುದು. ಆದರೆ, ಮೊದಲ ಪರೀಕ್ಷೆ
ಯಲ್ಲೇ ಉತ್ತೀರ್ಣವಾಗಲು ಸ್ಥಳೀಯ ಅಭ್ಯರ್ಥಿಗಳಿಗೆ ಸಾಧ್ಯವಾಗುವುದಿಲ್ಲ’ ಎಂದು ಹೇಳಿದರು. ಬನವಾಸಿ ಬಳಗದ ಅರುಣ್ ಜಾವಗಲ್, ‘ಸಂವಿಧಾನದ 343ರಿಂದ 351ನೇ ವಿಧಿಗಳು ಹಿಂದಿಯ ಬಳಕೆ ಮತ್ತು ಬೋಧನೆಗೆ ಸಂಬಂಧಿಸಿವೆ. ದೇಶದಲ್ಲಿ ಹಿಂದಿ ಹೇರಿಕೆ ಪ್ರಬಲವಾಗಲು ಕಾರಣವಾಗಿರುವ ಅಂಶಗಳಿವು. ಈ ವಿಧಿಗಳಿಗೆ ತಿದ್ದುಪಡಿ ತರುವ ಅಥವಾ ರದ್ದು ಮಾಡುವ ಕೆಲಸವನ್ನು ಕಾಂಗ್ರೆಸ್ ಮಾಡಬೇಕು’ ಎಂದು ಸಲಹೆ ನೀಡಿದರು.