ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯುತ್‌ ತಂತಿ ಸ್ಪರ್ಶ: ಒರ್ವ ಸಾವು, 13 ಬಾಲಕರಿಗೆ ಗಾಯ

Last Updated 11 ಏಪ್ರಿಲ್ 2018, 10:11 IST
ಅಕ್ಷರ ಗಾತ್ರ

ರಾಯಚೂರು: ದಿಬ್ಬಣ ಹೊರಟಿದ್ದ ಲಾರಿಯ ಟಾಪ್‌ ಮೇಲೆ ಕುಳಿತ್ತಿದ್ದ 14 ಬಾಲಕರಿಗೆ ವಿದ್ಯುತ್‌ ತಂತಿ ತಗುಲಿದ ಪರಿಣಾಮ 13 ಮಂದಿ ಗಾಯಗೊಂಡಿದ್ದು, ಓರ್ವ ಬಾಲಕ ಮೃತಪಟ್ಟಿರುವ ಘಟನೆ ಜಿಲ್ಲೆಯ ಮಸ್ಕಿ ತಾಲ್ಲೂಕಿನ ಬುದ್ದಿನ್ನಿ ಗ್ರಾಮದ ಬಳಿ ಬುಧವಾರ ನಡೆದಿದೆ.

ಮಟ್ಟೂರ್‌ ಗ್ರಾಮದ ದಾವೂದ್‌ ಇಬ್ರಾಹಿಂ (17) ಮೃತಪಟ್ಟಿದ್ದು, ಇನ್ನುಳಿದ ಬಾಲಕರಿಗೆ ಮುಖ ಹಾಗೂ ಎದೆಭಾಗದಲ್ಲಿ ಸುಟ್ಟ ಗಾಯಗಳಾಗಿವೆ.

ಘಟನೆಯಲ್ಲಿ ಗಾಯಗೊಂಡವರನ್ನು ಲಿಂಗಸುಗೂರು ತಾಲ್ಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಮರೇಶ್ವರ ಕ್ಯಾಂಪ್‌ನಲ್ಲಿ ಏರ್ಪಡಿಸಿದ್ದ ಮದುವೆಯಲ್ಲಿ ಪಾಲ್ಗೊಳ್ಳಲು ಮಸ್ಕಿ ತಾಲ್ಲೂಕಿನ ಮಟ್ಟೂರಿನಿಂದ ದಿಬ್ಬಣ ಹೊರಟಿದ್ದರು. ಮೇನ್‌ಲೈನ್‌ ತಂತಿಯನ್ನು ಗಮನಿಸದೆ ಲಾರಿ ಚಲಾಯಿಸಿದ್ದು ಈ ಅನಾಹುತ ನಡೆಯಲು ಕಾರಣ ಎನ್ನಲಾಗಿದೆ. ಮುದಗಲ್‌ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT