ಕಾಂಗ್ರೆಸ್ ಮುಖಂಡ ಸಪ್ತಗಿರಿ ಶಂಕರ್ನಾಯಕ್ ಮಾತನಾಡಿ, ‘ಒಂದು ಆಂಬುಲೆನ್ಸ್ ನೆಲಮಂಗಲ ಪಟ್ಟಣ, ಇನ್ನೊಂದು ದಾಬಸ್ಪೇಟೆಯಲ್ಲಿ ಇರಲಿದೆ. ಆಮ್ಲಜನಕ, ತರಬೇತಿ ಪಡೆದ ಸಿಬ್ಬಂದಿ ಕರ್ತವ್ಯ ನಿರ್ವಹಿಸಲಿದ್ದಾರೆ. ಯಾವ ಪ್ರದೇಶದಲ್ಲಿ ಸೋಂಕಿತರು ಹೆಚ್ಚಾಗಿದ್ದಾರೊ ಅಲ್ಲಿ ಸೋಂಕು ನಿವಾರಕ ದ್ರಾವಣ ಸಿಂಪಡಿಸಲಾಗುವುದು’ ಎಂದರು.