ನೆಲಮಂಗಲ: ಶಿಕ್ಷಕರ ಬಡ್ತಿ, ವರ್ಗಾ ವಣೆ, ಅನ್ಯಕಾರ್ಯಗಳಿಗೆ ಶಿಕ್ಷಕರ ನಿಯೋಜನೆ ಮತ್ತು ವಿದ್ಯಾಗಮ ಯೋಜನೆಯಲ್ಲಿ ಸರ್ಕಾರದ ಧೋರಣೆ ವಿರುದ್ಧ ಶಾಸಕ ಡಾ.ಕೆ. ಶ್ರೀನಿವಾಸಮೂರ್ತಿ ಕಿಡಿಕಾರಿದರು.
ಶೈಕ್ಷಣಿಕ ಸವಾಲುಗಳ ಬಗ್ಗೆ ಖಾಸಗಿ ವಿದ್ಯಾಸಂಸ್ಥೆಗಳು ಹಮ್ಮಿಕೊಂಡಿದ್ದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
‘ವಿದ್ಯಾಗಮ ಯೋಜನೆಯಲ್ಲಿ ಸಾಕಷ್ಟು ಸಮಸ್ಯೆಗಳು ಆಗಿವೆ. ಇದರಲ್ಲಿ ಸುಧಾರಣೆ ತಂದು ಅನುಷ್ಠಾನ ಮಾಡಬೇಕು’ ಎಂದು ಖಾಸಗಿ ಶಾಲೆಗಳ ಒಕ್ಕೂಟದ ರಾಜ್ಯ ಕಾರ್ಯದರ್ಶಿ ಸೂಡಿ ಸುರೇಶ್ ಹೇಳಿದರು.