ಕೆಎಎಸ್ ಹುದ್ದೆಗಳ ನೇಮಕಾತಿಗೆ ಸರ್ಕಾರ 1998, 1999, 2004ರಲ್ಲಿ ಅಧಿಸೂಚನೆಗಳನ್ನು ಪ್ರಕಟಿಸಿತ್ತು. ಈ ಮೂರೂ ಅಧಿಸೂಚನೆಗಳಲ್ಲೂ ಅಂಗವಿಕಲರಿಗೆ ಮೀಸಲಾತಿ ಕಲ್ಪಿಸದಿರುವುದನ್ನು ಪ್ರಶ್ನಿಸಿ ಕೆಲವು ಅಭ್ಯರ್ಥಿಗಳು ಕರ್ನಾಟಕ ಆಡಳಿತ ನ್ಯಾಯಮಂಡಳಿಯ ಮೊರೆ ಹೋಗಿದ್ದರು. ವಿಶ್ವನಾಥ ಹಿರೇಮಠ, ಶಂಕರಗೌಡ ಸಿ. ದೊಡ್ಡಮನಿ ಸೇರಿದಂತೆ ಆರು ಮಂದಿಯನ್ನು ಅಂಗವಿಕಲರ ಕೋಟಾದಡಿ ನೇಮಕಾತಿ ಮಾಡಿಕೊಳ್ಳುವಂತೆ ನ್ಯಾಯಮಂಡಳಿ ಆದೇಶ ಮಾಡಿತ್ತು. ಆದರೂ, ಈ ಮೂರು ನೇಮಕಾತಿಗಳಲ್ಲೂ ಉಪವಿಭಾಗಾಧಿಕಾರಿ (ಗ್ರೂಪ್ ಎ) ಹುದ್ದೆಗಳಿಗೆ ಅಂಗವಿಕಲರಿಗೆ ಮೀಸಲಾತಿ ಕಲ್ಪಿಸಿರಲಿಲ್ಲ. ಹಾಗಾಗಿ, ಹಿರೇಮಠ ಸೇರಿದಂತೆ ಆರು ಮಂದಿಗೆ ಗ್ರೂಪ್ ಎ ಬದಲು ಗ್ರೂಪ್ ಬಿ ಹುದ್ದೆಗಳು ಲಭಿಸಿದ್ದವು.