ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ: ಸಿಡಿಲಿಗೆ ಕುರಿಗಾಹಿ ಸೇರಿದಂತೆ 43 ಕುರಿ ಬಲಿ

Last Updated 14 ಮೇ 2018, 15:59 IST
ಅಕ್ಷರ ಗಾತ್ರ

ವಿಜಯಪುರ: ಸಿಡಿಲು ಬಡಿದು ವ್ಯಕ್ತಿಯೊಬ್ಬ ಸೇರಿದಂತೆ, 43 ಕುರಿ ಸಾವಿಗೀಡಾದ ಪ್ರತ್ಯೇಕ ಘಟನೆ ತಾಳಿಕೋಟೆ ತಾಲ್ಲೂಕಿನ ವಿವಿಧೆಡೆ ಸೋಮವಾರ ಸಂಜೆ ನಡೆದಿದೆ.

ನಾಗೂರ ಗ್ರಾಮದ ಕುರಿಗಾಹಿ ದೇವಪ್ಪ ಸಾಬಣ್ಣ ಕುರಿ  (25) ಎಂಬಾತ ಕುರಿ ಹಿಂಡಿನೊಂದಿಗೆ ಹೊರಗಿದ್ದ ಸಂದರ್ಭ, ಸಿಡಿಲು ಬಡಿದು 22 ಕುರಿಗಳ ಜತೆ ಮೃತಪಟ್ಟಿದ್ದಾರೆ. ಸಿಡಿಲಿನ ಹೊಡೆತಕ್ಕೆ ಸಾಕು ನಾಯಿಯೂ ಬಲಿಯಾಗಿದೆ.

ಹಗರಗೊಂಡ ಗ್ರಾಮದ ಸಿದ್ದಪ್ಪ ಸೋಮಪ್ಪ ಗಾಡಿ, ಸೋಮಪ್ಪ ಚಂದಪ್ಪ ಮಾದರ, ಶಿವಪ್ಪ ಬಸಲಿಂಗಪ್ಪ ಬಾಚಿಹಾಳ ಎಂಬುವರಿಗೆ ಸೇರಿದ 21 ಕುರಿ ಸಿಡಿಲಿನ ಹೊಡೆತಕ್ಕೆ ಮೃತಪಟ್ಟಿವೆ. ಈ ಕುರಿ ಹಿಂಡಿನ ಜತೆಯಲ್ಲಿದ್ದ ಮೂವರು ಕುರಿಗಾಹಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಾಳಿಕೋಟೆ ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT